ಜಾನಪದ ಶಿಷ್ಟ ಸಾಹಿತ್ಯದ ತಾಯಿಬೇರು

0
124

ಕಲಬುರಗಿ: ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜನಪದವಾಗಿದೆ. ಇದು ಶಿಷ್ಟ ಸಾಹಿತ್ಯಕ್ಕೆ ತಾಯಿಬೇರಾಗಿದೆ. ಬದುಕುವ ಕಲೆ, ಜೀವನದ ವಾಸ್ತವಿಕತೆಯನ್ನು ಕಲಿಸಿಕೊಡುತ್ತದೆ. ಜೀವನದ ಪರೀಕ್ಷೆಯಲ್ಲಿ ಯಶಸ್ಸುಗೊಳಿಸುತ್ತದೆ. ಇಂದಿನ ಒತ್ತಡದ ಬದುಕಿಗೆ ನೆಮ್ಮದಿ ದೊರೆಯುತ್ತದೆ. ಜನಪದರು ನಿಸರ್ಗ ತತ್ವ ಪ್ರತಿಪಾದಕರು. ಟಿ.ವಿ, ಮೋಬೈಲ್ ಹಾವಳಿಯಲ್ಲಿ ಜನಪದವನ್ನು ಮರೆತರೆ, ದೇಶದ ಸಂಸ್ಕøತಿಗೆ ದಕ್ಕೆ ಬರುತ್ತದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಕಜಾಪ ತಾಲೂಕಾ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಕನ್ನಡ ಜಾನಪದ ಪರಿಷತ್’ನ 9ನೇ ಸಂಸ್ಥಾಪನಾ ದಿನಾಚರಣೆ : ಜಾನಪದ ಕಲಾವಿದರು ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿಯ ಕನ್ನಡ ವಿಷಯ ಟಾಪರ್‍ಗಳಿಗೆ ಗೌರವ ಸತ್ಕಾರ, ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ, ನಮ್ಮ ದೇಶದ ಮೂಲ ಸಂಸ್ಕøತಿ, ಪರಂಪರೆಯಾದ ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಕಜಾಪ ತಾಲೂಕಾ ಘಟಕದ ಅಧ್ಯಕ್ಷ ದೇವಿಂದ್ರ ಬಿ.ಗುಡೂರ್, ನಾಡಿನ ಸಾಹಿತ್ಯ, ಸಾಂಸ್ಕøತಿಕ ವಲಯಕ್ಕೆ ಜೇವರ್ಗಿ ಕೊಡುಗೆ ಅಪಾರವಾಗಿದೆ. ನಮ್ಮ ಪರಿಷತ್ ವತಿಯಿಂದ ತಾಲೂಕಿನಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದ ಅಧ್ಯಕ್ಷ ಮಹಮ್ಮದ್ ಹನೀಫ್ ಸೌದಾಗರ್, ಪರಿಷತ್ ತಾಲೂಕಾ ಘಟಕದ ಸದಸ್ಯ ರಾಯಣ್ಣ ಕಟ್ಟಿಮನಿ, ಉಪನ್ಯಾಸಕಿ ರಹಿಮುನ್ನೀಸ್ ಬೇಗಂ, ತರಬೇತಿ ಕೇಂದ್ರದ ಸಿಬ್ಬಂದಿಗಳಾದ ಅಹಮ್ಮದ್ ಹುಸೆÉೀನ್, ಹುಸೇನ್ ಬಾಷಾ, ಶಿಲ್ಪಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಾನಪದ ಯುವ ಕಲಾವಿದರಾದ ಮಾರುತಿ ಟಿ.(ಗೊಂದಲಿ), ಲಕ್ಷ್ಮೀಕಾಂತ ಪೂಜಾರಿ(ಡೊಳ್ಳು) ಹಾಗೂ ಕನ್ನಡ ವಿಷಯದ ಎಸ್ಸೆಸ್ಸೆಲ್ಸಿ ಟಾಪರ್ ಬಸವರಾಜ ಹೂಗಾರ, ಪಿಯುಸಿ ಟಾಪರ್ ಕವಿತಾ ಕೆ. ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here