ಯಡಾ ಮಾರ್ಟೀನ್ ವರ್ಗಾವಣೆ ಹೈ ಕೋರ್ಟ್ ತಡೆಯಾಜ್ಞೆ.?

0
129

ಕಲಬುರಗಿ: ಎಸ್ಪಿ ಯಡಾ ಮಾರ್ಟಿನ್ ವರ್ಗಾವಣೆಗೆ ರಾಜ್ಯ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮಾರ್ಟಿನ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಅ.19 ರಂದು ಆದೇಶ ಹೊರಡಿಸಿತ್ತು. ಅವರ ಜಾಗಕ್ಕೆ ವಿನಾಯಕ್ ಪಾಟೀಲ ಅವರನ್ನುವರ್ಗಾವಣೆ ಮಾಡಿ ಕಲಬುರಗಿಗೆ ನೂತನ ಎಸ್ಪಿಯಾಗಿ ನೇಮಕ ಮಾಡಲಾಗಿತ್ತು. ಸರಕಾರದ ಈ ನಿರ್ಧಾರ ಪ್ರಶ್ನಿಸಿ, ಅವಧಿಗೆ ಮುಂಚೆ ವರ್ಗಾವಣೆ ಪ್ರಶ್ನಿಸಿ ಯಡಾ ಮಾರ್ಟಿನ್ ಹೈ ಕೋರ್ಟ್ ಮೊರೆ ಹೋಗಿದ್ದರು.

Contact Your\'s Advertisement; 9902492681

ನ್ಯಾಯ ಮೂರ್ತಿ ಎಲ್. ನಾರಾಯಣಸ್ವಾಮಿ ಮತ್ತು ಆರ್. ದೇವದಾಸ್ ಅವರನ್ನೊಳಗೊಂಡ ಪೀಠ ಯಡಾ ಮಾರ್ಟೀನ್ ಅವರ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.

ಹೈ ಕೋರ್ಟ್ ಆದೇಶದ ಪ್ರತಿ ಪೊಲೀಸ್ ಮಹಾ ನಿರ್ದೇಶಕರಿಗೆ ತಲುಪಿದ ನಂತರ ಅಧಿಕೃತ ಆದೇಶ ಹೊರಬರಬೇಕಿದೆ. ಸುದ್ದಿ ಮೂಲಗಳ ಪ್ರಕಾರ ನಾಳೆ ಅಥವಾ ಮಂಗಳವಾರ ಯಡಾ ಮರ್ಟಿನ್ ಮತ್ತೆ ಅಧಿಕಾರ ಸ್ವೀಕರಿಸಲಿದ್ದಾರೆಂದು ಮಾಹಿತಿ ಕೇಳಿಬರುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here