ಗಣೇಶ ಉತ್ಸವದಲ್ಲಿ ಸೂಪ್ತ ಪ್ರತಿಭೆ ಹೊರಬರಲಿ: ಸುರೇಶ ಪಾಟೀಲ್ ನೇದಲಗಿ

0
117

ಜೇವರ್ಗಿ: ಗಣೇಶ ಉತ್ಸವ ಆಚರಿಸುವುದು ಕೇವಲ ಮನರಂಜನೆಗಲ್ಲˌ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರತೆಗೆಯಲು ಇಂತಹ ಕಾರ್ಯಕ್ರಮ ಅವಶ್ಶಕ ಎಂದು ಬಿಜೆಪಿ ಯುವ ಮುಖಂಡ ಸುರೇಶ ಪಾಟೀಲ್ ನೇದಲಗಿ ಅಭಿಪ್ರಾಯಪಟ್ಟರು.

ತಾಲೂಕಿನ ಕೋನಸಿರಸಗಿ ಗ್ರಾಮದ ಗಣೇಶ ಉತ್ಸವದ ವಿಸರ್ಜನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹಬ್ಬ ಹರಿದಿನಗಳಿಗೆ ತನ್ನದೆಯಾದ ಮಹತ್ವಗಳಿವೆ. ಗಣೇಶ ಉತ್ಸವದಲ್ಲಿ ತೋರಿದ ಪ್ರತಿಭೆಯಿಂದ ಹಲವರು ಬೆಳಕಿಗೆ ಬಂದಿದ್ದಾರೆ. ಇಂತಹ ಉತ್ಸವಗಳಿಂದ ಕಲೆˌ ಸಾಹಿತ್ಶˌ ಸಂಸ್ರ್ಕತಿ ಬೆಳೆಸಲು ಸಹಾಯಕವಾಗುತ್ತದೆ. ಕೋನಸಿರಸಗಿ ಗ್ರಾಮದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳು ನಡೆಸುತ್ತಿರುವುದು ಸಂತಸದ ವಿಷಯ ಎಂದರು.

Contact Your\'s Advertisement; 9902492681

ಮುಂಬರುವ ದಿನಗಳಲ್ಲಿ ಮಕ್ಕಳನ್ನು ಇನ್ನಷ್ಟು ಕಾರ್ಯಕ್ರಮದಲ್ಲಿ ತೊಡಗಿಸುವುದರ ಮೂಲಕ ಅವರ ಪ್ರತಿಭೆಗೆ ಬೆಲೆ ಕೊಡಬೇಕು ಎಂದರು. ಈ ಸಂದರ್ಭದಲ್ಲಿ ವಿಜಯಕುಮಾರ ಹಿರೇಮಠˌ ಮಹಾದೇವಪ್ಪ ಸಂಕಾಲಿˌ ಸುಬ್ಬರಾವ ಸುಬೇದಾರˌ ಶಿವರಾಜ ಖಾನಗೌಡರˌ ಸಾಹೇಬಗೌಡ ತೆಗ್ಗೆಳ್ಳಿˌ ರುದ್ರಗೌಡ ಹವಳಗಿˌ ಭಗವಂತ್ರಾಯ ಬಳೂಂಡಗಿˌ ಭಗು ಬಿರಾದಾರˌ ಸುರೇಶ ಯಡ್ರಾಮಿˌ ದೇವಿಂದ್ರ ಸಿಂಗೆ ಸೇರಿದಂತೆ ಗಜಾನನ ಯುವ ಮಂಡಳಿˌ ಗ್ರಾಮಸ್ಥರುˌ ಸ್ಥಳೀಯ ಗಣ್ಯರು ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here