ಕೆನರಾ ಬ್ಯಾಂಕ ವತಿಯಿಂದ ಸಾರಿಗೆ ಬಸ್ ಸಿಬ್ಬಂದಿಗಳಿಗೆ ನೀರಿನ ಫಿಲ್ಟರ್ ವಿತರಣೆ

0
54

ಕಲಬುರಗಿ: ಇಂದು ಅಂಬೇಡ್ಕರ ಜಯಂತಿಯ ಶುಭ ಸಂದರ್ಭದಲ್ಲಿ, ಕೆನರಾ ಬ್ಯಾಂಕ ವತಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ವಿಭಾಗೀಯ ಕಛೇರಿ ಹಾಗೂ ನಿಗಮದ ಎಲ್ಲಾ ಬಸ್ ಡಿಪೋಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆಗಾಗಿ, ನೀರಿನ ಫಿಲ್ಟರ್ ಗಳನ್ನು ಸಾಮಾಜಿಕ ಬದ್ಧತೆ ಅಡಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಪ್ಪ, ಉಪ ಲೆಕ್ಕ ಅಧಿಕಾರಿ ಶ್ರೀದೇವಿ ಜಿ ಎಸ್., ಕೆನರಾ ಬ್ಯಾಂಕಿನ ಕ್ಷೇತ್ರೀಯ ವ್ಯವಸ್ಥಾಪಕ ಮನ್ನೆ ಜಗದೇಶ್ ಪ್ರಸಾದ ರಾವ್, ಎ ಜಿ ಎಂ, ವಿಭಾಗೀಯ ಪ್ರಭಂದಕರಾದ ಹನಮಂತರಾಯ ದೇಗಾಂವ, ವಿಠ್ಠಲ್ ಮಾಳಗಿ, ವರಿಷ್ಠ ಪ್ರಭಂದಕರಾದ ತಿಮ್ಮಾರೆಡ್ಡಿ ಹಾಗೂ ನಿಗಮದ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here