ಸೇವಾಲಾಲ ವೃತ್ತದ ಬಳಿ ಸ್ವಚ್ಛಗೊಳಿಸಲು ಆಗ್ರಹ

0
82

ಶಹಾಬಾದ: ನಗರದ ಎಸ್‌ಬಿಐ ಬ್ಯಾಂಕ್ ಹತ್ತಿರದ ಶ್ರೀ ಸೇವಾಲಾಲ ವೃತ್ತದಲ್ಲಿ ಕಲುಷಿತ ವಾತವಾರಣ ಸೃಷ್ಟಿಯಾಗಿದ್ದು, ಕೂಡಲೇ ನಗರಸಭೆಯ ಅಧಿಕಾರಿಗಳು ಸ್ವಚ್ಛಗೊಳಿಸಬೇಕೆಂದು ನಗರದ ಜೈ ಸೇವಾಲಾಲ ಯುವಕ ಸಂಘದ ಅಧ್ಯಕ್ಷ ಕಿರಣ ಚವ್ಹಾಣ, ವಿಕ್ರಮ ರಾಠೋಡ, ವಿಕ್ಕಿ ನಾಯಕ ಆಗ್ರಹಿಸಿದ್ದಾರೆ.

ಈಗಾಗಲೇ ಕೆಲವು ದಿನಗಳ ಹಿಂದಷ್ಟೇ ಈ ವಿಷಯದ ಕುರಿತು ನಗರಸಭೆಯ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.ಆದರೆ ವೃತ್ತದ ಬಳಿ ಸ್ವಚ್ಛಗೊಳಿಸುವ ದೂರದ ಮಾತು, ಕನಿಷ್ಠ ಪಕ್ಷ ಆ ಕಡೆ ತಲೆಯೂ ಹಾಕಿಲ್ಲ.ಇದರಿಂದ ವೃತ್ತದ ಬಳಿ ಸಾಕಷ್ಟು ಹಂದಿಗಳು ಓಡಾಡುತ್ತಿವೆ. ಹಂದಿಗಳ ಆವಾಸ ಸ್ಥಾನವಾಗಿದೆ.

Contact Your\'s Advertisement; 9902492681

ವೃತ್ತವನ್ನು ಸ್ವಚ್ಛವಾಗಿಡಬೇಕಾದ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಸರಿಯಲ್ಲ.ನಗರದ ಗಣ್ಯ ವ್ಯಕ್ತಿಗಳ ಮನೆಯ ಮುಂದೆ ಸ್ವಚ್ಛ ಮಾಡುವವರು ಇಲ್ಲೇಕೆ ಸ್ವಚ್ಛ ಮಾಡುತ್ತಿಲ್ಲ. ಎರಡು ದಿನಗಳ ಒಳಗಾಗಿ ವೃತ್ತದ ಬಳಿ ಸ್ವಚ್ಛಗೊಳಿಸಿ, ಸೂಕ್ತ ರಕ್ಷಣೆ ಒದಗಿಸದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here