ಕಲಬುರಗಿ: ಶ್ರೀ ಗಂಗಾ ನಗರದ ಶ್ರೀ ವೀರ ಆಂಜನೇಯ ದೇವರ ಭವ್ಯ ರಥೋತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಈ ರಥೋತ್ಸವಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ರಥಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಚಿನ್ಮಯಗಿರಿ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರು, ತೊನಸನಳ್ಳಿ ಮಠದ ಶ್ರೀ ಕೊತಲಪ್ಪ ಮುತ್ಯಾ,ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ನಿರ್ಣೋಧಾರಕ ಸಂಘ, ಶ್ರೀ ಜೈ ಗಂಗಾ ಹನುಮಾನ ಜಾತ್ರಾ ಉತ್ಸವ ಸಮಿತಿ ಗೌರವ ಅಧ್ಯಕ್ಷ ಸದಾಶಿವು ಜಿ. ಹಳ್ಳಿ ಅಧ್ಯಕ್ಷರಾದ ಉಮೇಶ ಹದಗಲ್, ಉಪಾಧ್ಯಕ್ಷ ಶರಣು ಎಸ್. ಕೌವಲಗಿ, ರಮೇಶ ಬಿದ್ದನೂರ, ಶ್ರೀಕಾಂತ ಆಲೂರ, ಬಾಬಾಸಾಹೇಹ ಕೂಡಿ, ಅಶೋಕ ಬಿದ್ದನೂರ, ಶಿವಲಿಂಗ ಮರತೂರ, ಅನೀಲ ಕೂಡಿ, ಶರಣು ಕೌವಲಗಿ, ನಟರಾಜ ಕಟ್ಟಿಮನಿ, ಅರ್ಜುನಪ್ಪ ಜಮಾದಾರ, ಅಂಬು ಡಿಗ್ಗಿ, ಜಯಪ್ರಕಾಶ್ ಕಮಕನೂರ, ಸಂದೇಶ ಕಮಕನೂರ, ಸುರೇಶ ಕಮಕನೂರ, ಪತ್ರಕರ್ತ ವ್ಹಿ.ಎನ್. ಮಲ್ಲಿಕಾರ್ಜುನ, ಛಾಯಾಗ್ರಾಹಕ ಶರಣು ಬೆಣ್ಣೂರ, ಮಹಾನಗರ ಪಾಲಿಕೆ ಸದಸ್ಯರಾದ ಗುರುರಾಜ ಪಟ್ನಾಳ, ರಾಯಪ್ಪ ಹೊನಗುಂಟಿ ಸೇರಿದಂತೆ ಹಲವಾರು ಮುಖಂಡರು ಮತ್ತು ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು.