ಯಾದಗಿರಿಯಲ್ಲಿ ಯುವಕನ ಕೊಲೆ ಮಾಡಿದ ಆರೋಪಿಗಳಿ ಕಠಿಣ ಶಿಕ್ಷೆ ನೀಡಲು ಆಗ್ರಹ

0
24

ಶಹಾಬಾದ:ಯಾದಗಿರಿಯಲ್ಲಿ ರಾಕೇಶ ಎಂಬ ಯುವಕನನ್ನು ಕೊಲೆ ಮಾಡಿರುವ ಫಯಾಜ್ ಹಾಗೂ ಅವನ ಸಂಗಡಿಗರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಮಾದಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಕೇವಲ ರೊಟ್ಟಿ ಕೇಳಲು ಹೋದ ರಾಕೇಶ ಎಂಬ ಯುವಕನ ಮೇಲೆ ಫಯಾಜ್ ಹಾಗೂ ಇನ್ನೂ 7 ಜನ ಸಂಗಡಿಗರು ಕೂಡಿಕೊಂಡು ಕೊಲೆ ಮಾಡಿದ್ದಾರೆ.ಇದು ಅಮಾನವೀಯ ಘಟನೆ.ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ಮುಸ್ಲಿಂ ಸಮುದಾಯದ ಯುವಕರಿಂದ ಇತರ ಸಮುದಾಯದ ಯುವಕರ ಮೇಲೆ ಹಲ್ಲೆ, ಕೊಲೆ ಮಾಡುವ ಘಟನೆಗಳು ನಡೆಯುತ್ತಿವೆ.ಈ ಬಗ್ಗೆ ರಾಜ್ಯ ಸರಕಾರ ಕ್ರಮಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದರಿಂದ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಿವೆ.ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು. ಸರಕಾರದಿಂದ ಮೃತ ಕುಟುಂಬಕ್ಕರ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಿಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾದಿಗ ಸಮಾಜದ ತಾಲೂಕಾಧ್ಯಕ್ಷ ವಿಕ್ರಮ್ ಮೂಲಿಮನಿ,ಶರಣು ಪಗಲಾಪೂರ,ಶಿವರಾಜ ಕೋರೆ,ರವಿ ಬೆಳಮಗಿ,ಸ<ತೋಷ ಹುಲಿ, ಪರಶುರಾಮ ದೇವತಕಲ್,ಲಕ್ಷ್ಮಿಕಾಂತ ಬಳಿಚಕ್ರ, ಮಹೇಶಕುಮಾರ ಕಾಂಬಳೆ,ಶ್ರೀಧರ್ ಕೊಲ್ಲೂರ್,ಪ್ರಮೋದ ಮಲ್ಲಾರ್,ಶಿವನಾಗ ದುಪ್ಪಲ್ಲಿ, ಯಲ್ಲಾಲಿಂಗ ಹೈಯ್ಯಾಳಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here