ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಯಾಪೈಸೆ ಲಾಭವಾಗಿಲ್ಲ: ಸಚಿವ ಶರಣಪ್ರಕಾಶ ಪಾಟೀಲ್.

0
9

ಕಲಬುರಗಿ: ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನಯಾ ಪೈಸೆ ಲಾಭವಾಗಿಲ್ಲ. ಮೋದಿ ಬರೀ ಉದ್ರಿ ಭಾಷಣ ಮಾಡಿಕೊಂಡೇ ಇದ್ದಾರೆ. ಉದ್ರಿ ಭಾಷಣದಿಂದ ಯಾರ ಹೊಟ್ಟೆ ತುಂಬಲ್ಲ. ಆದರೆ ನಮ್ಮ ಸರ್ಕಾರದ ಗ್ಯಾರಂಟಿಗಳು ಪಕ್ಕಾ ಗ್ಯಾರಂಟಿಗಳಾಗಿವೆ, ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಹೇಳಿದರು.

ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸ್ವಾಭಿಮಾನದ ಬದುಕು ರೂಪಿಸುವುದೇ ಕಾಂಗ್ರೆಸ್ ಪಕ್ಷದ ಸಿದ್ದಾಂತ. ಆದರೆ ಬಿಜೆಪಿಯದು ಭ್ರಷ್ಟಾಚಾರವೇ ಸಿದ್ದಾಂತವಾಗಿದೆ. ಹಾಗಾಗಿ 40% ಭ್ರಷ್ಟ ಸರ್ಕಾರವನ್ನು ಜನರೇ ಕಿತ್ತು ಹಾಕಿದ್ದಾರೆ. ಸರ್ಕಾರಿ ಮೆಡಿಕಲ್ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ಕಿದ್ವಾಯಿ, ಜಯದೇವ, ಟ್ರಾಮಾ ಕೇರ್ ಸೆಂಟರ್ ಈ ಎಲ್ಲ ಯೋಜನೆಗಳನ್ನು ಕಲಬುರಗಿಗೆ ತಂದಿದ್ದೇವೆ. ಇದು ನಮ್ಮ ಅಭಿವೃದ್ದಿ ಪಟ್ಟಿ ಹಾಗೂ ಬದ್ದತೆ. ಬಿಜೆಪಿಗರು ಏನು ಮಾಡಿದ್ದಾರೆ. ಮೋದಿ ಮುಖ ನೋಡಿ ಓಟು ಹಾಕಿ ಅಂತ ಹೇಳುತ್ತಾರೆ. ಎರಡು ಬಾರಿ ಅವರ ಮುಖ ನೋಡಿ ಓಟು ಹಾಕಿದ ಜನರು ಎರಡೂ ಕೈಯಿಂದ ಉಂಡಿದ್ದಾರೆ ಎಂದು‌ ಟೀಕಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here