ಚೌಕ್ ಪೊಲೀಸರ ಕಾರ್ಯಾಚರಣೆ ಮೂವರು ಕೊಲೆ ಆರೋಪಿಗಳ ಬಂಧನ

0
1528

ಕಲಬುರಗಿ: ನಗರದ ನೆಹರು ಗಂಜ್ ಪ್ರದೇಶದ ಚಿತ್ತಾಪುರ ಟ್ರಾನ್ಸ್‌ಪೋರ್ಟ್‌ ಹತ್ತಿರ ಹಣದ ವಿಷಯಕ್ಕೆ ಸಂಬಂಧಿಸಿದಂತ ವ್ಯಕ್ತಿ ಓರ್ವನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಮೂವರು ಆರೋಪಿಗಳನ್ನು ಚೌಕ್ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಬಂಧಿಸುವಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಇನ್ಸಪೆಕ್ಟರ್ ಶಕೀಲ್ ಅಹ್ಮದ್ ನೇತೃತ್ವದ ಪಿ.ಎಸ್.ಐ ಶಿವಶಂಕರ ಹಾಗೂ ಸಿಬ್ಬಂದಿ ಅಶೋಕ್, ಸಿದ್ರಾಮಯ್ಯ, ನಾಗೇಂದ್ರ, ಉಮೇಶ್, ರಾಜಕುಮಾರ, ಸೈಯದ್ ತೌಸೀಫ್ ಹುಸೇನರವರನ್ನು ಒಳಗೊಂಡ ತಂಡವನ್ನು ರಚಿಸಿ ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ ಬಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಲಯ ಬಂಧನಕ್ಕೆ ಒಪ್ಪಿಸಲಾಗಿದೆ.

Contact Your\'s Advertisement; 9902492681

ರಮೇಶ ಜಗನ್ನಾಥ, ನವೀನ್ ಸುದರ್ಶನ, ಹಾಗೂ ಅಶೋಕ ಜಗನ್ನಾಥ ಹರಸೂರು ಬಂಧಿತ ಕೊಲೆ ಆರೋಪಿಗಳು ನಗರದ ಜಗತ್ ಸರ್ಕಲ್ ದ ಗಾಜಿಪೂರ ಬಡಾವಣೆಯಲ್ಲಿ ಆರೋಪಿಗಳು ತಲೆ ಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಹಣದಲ್ಲಿ ತಕರಾರು ಉಂಟಾಗಿರುವುದರಿಂದ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here