ನಾಡು ನುಡಿಗಾಗಿ ಹೋರಾಟದ ಜೊತೆ ಸಮಾಜ ಮುಖಿ ಕಾರ್ಯ ಮಾಡುತ್ತೇವೆ; ಯಲ್ಲಪ್ಪ

0
3

ಸುರಪುರ: ನಮ್ಮ ಜಯಕರ್ನಾಟಕ ಸಂಘಟನೆ ಕೇವಲ ನಾಡು ನುಡಿಗಾಗಿ ಹೋರಾಟ ಮಾತ್ರವಲ್ಲದೆ ನಮ್ಮ ಸಂಘಟನೆ ಸಂಸ್ಥಾಪಕರಾಗಿದ್ದ ದಿ.ಎನ್.ಮುತ್ತಪ್ಪ ರೈ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಸಮಾಜ ಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಜಯಕರ್ನಾಟಕ ತಾಲೂಕು ಅಧ್ಯಕ್ಷ ಯಲ್ಲಪ್ಪ ನಾಯಕ ಕಬಾಡಗೇರ ಮಾತನಾಡಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ದಿ.ಎನ್.ಮುತ್ತಪ್ಪ ರೈ ಅವರ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ,ಎನ್.ಮುತ್ತಪ್ಪ ರೈ ಅವರು ಇಡೀ ರಾಜ್ಯದಲ್ಲಿ ನಮ್ಮ ಸಂಘಟನೆಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಆದರ್ಶವನ್ನು ಕಲಿಸಿಕೊಟ್ಟಿದ್ದಾರೆ.ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರಿಂದ ಅಂದಿನಿಂದ ಇಂದಿನವರೆಗೂ ನಾಲ್ಕು ವರ್ಷಗಳಿಂದ ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ಇಂದು ಬೆಂಗಳೂರಿನಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ ಅವರ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,ಅಲ್ಲದೆ ನಾಡಿನಾದ್ಯಂತ ಎಲ್ಲೆಡೆ ಇಂದು ಅನ್ನದಾಸೋಹ ಕಾರ್ಯಕ್ರಮದ ಮೂಲಕ ಜನರಿಗೆ ನೆರವಾಗುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.ಅಲ್ಲದೆ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿರುವ ಪಿ.ಎಸ್.ಐ ಶರಣಪ್ಪ ಹವಲ್ದಾರ್ ಅವರ ಬೆಂಬಲ ಸ್ಮರಣಿಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಎನ್.ಮುತ್ತಪ್ಪ ರೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿದರು.ನಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ ಪಿಎಸ್‍ಐ ಶರಣಪ್ಪ ಹವಲ್ದಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಸಿ,ಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯ ವೆಂಕಟೇಶ ಶುಕ್ಲಾ, ಗೋಪಾಲ ನಾಯಕ ಸತ್ಯಂಪೇಟೆ,ಹೆಚ್.ಎನ್.ಮಾಲಿಗೌಡ,ಸಯ್ಯದ್ ಫಯಾಜ್,ದೇವು ನಾಯಕ,ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ಬಿಚ್ಚಗತ್ತಿಕೇರ,ಮಲ್ಲು ಬಿಲ್ಲವ್,ಪರಶುರಾಮ್, ಚಂದ್ರು ಡೊಣ್ಣಿಗೇರ,ಹಣಮಗೌಡ ರುಕ್ಮಾಪುರ,ಬಸ್ಸು ರುಕ್ಮಾಪುರ,ಹಮೀದ್,ಖಾಜಾಹುಸೇನ್ ಸೇರಿದಂತೆ ಅನೇಕರಿದ್ದರು.

ದಿ.ಎನ್.ಮುತ್ತಪ್ಪ ರೈ ಅವರ ಪುಣ್ಯಸ್ಮರಣೆ ಅಂಗವಾಗಿ ಜಯಕರ್ನಾಟಕ ಸಂಘಟನೆ ಅನ್ನದಾಸೋಹ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. – ಶರಣಪ್ಪ ಹವಲ್ದಾರ್ ಪಿ.ಎಸ್.ಐ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here