ಅಂಜಲಿ ಕುಟುಂಬಕ್ಕೆ 1 ಕೋಟಿ ಪರಿಹಾರ, ಆರೋಪಿಗೆ ಕಠಿಣ ಶಿಕ್ಷೆಗೆ ಪೂಜ್ಯ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ ಆಗ್ರಹ

0
81

ಕಲಬುರಗಿ: ಹುಬ್ಬಳ್ಳಿಯ ಪೀಠಾಪುರ ಓಣಿಯಲ್ಲಿ ಕೋಲಿ ಕಬ್ಬಲಿಗ ಸಮಾಜದ ಅಂಜಲಿ ಅಂಬಿಗೇರ್ ಅವರಿಗೆ ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಕೊಲೆ ಆರೋಪಿಗೆ ಕಠಿಣವಾದ ಶಿಕ್ಷೆಯಾಗಬೇಕು. ಅಂಜಲಿ ಅಂಬಿಗೇರ್ ಪರಿವಾರಕ್ಕೆ ರಾಜ್ಯ ಸರ್ಕಾರವು ಒಂದು ಕೋಟಿ ಪರಿಹಾರ ಕೊಡಬೇಕು. ಆಕೆಯ ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಬೇಕು.

ಈ ಕೊಲೆಗೆ ಪೆÇಲೀಸ್ ಇಲಾಖೆ ನಿರ್ಲಕ್ಷವೇ ಪ್ರಮುಖ ಕಾರಣವಾಗಿದೆ. ಅಂಜಲಿ ಪರಿವಾರದವರು ಇಂತಹ ಘಟನೆಯ ಬಗ್ಗೆ ಪೆÇೀಲೀಸ್ ಇಲಾಖೆಗೆ ಮುಂಚಿತವಾಗಿ ತಿಳಿಸಿದ್ದರೂ ಪೆÇಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ.

Contact Your\'s Advertisement; 9902492681

ಇಂತಹ ಘಟನೆಗಳು ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಅದರಲ್ಲೂ ಕೋಲಿ ಸಮಾಜದವರ ಮೇಲೆ ದೌರ್ಜನ್ಯಗಳು ಬಹಳ ನಡೆಯುತ್ತಿವೆ. ಹೀಗೆ ಮುಂದುವರೆದರೆ ಮುಂಬರುವ ದಿನಗಳಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ತೊನಸನಹಳ್ಳಿ ಎಸ್ ಅಲ್ಲಮಪ್ರಭು ಪೀಠದ ಪೂಜ್ಯ ಶ್ರೀ ಮಲ್ಲಣಪ್ಪ ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here