ಕಿರದಳ್ಳಿ ತಾಂಡಾದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಇಸ್ಪೀಟ್ ಆಟ; ಶರಣಪ್ಪ ತಳವಾರಗೇರ

0
21

ಸುರಪುರ: ತಾಲೂಕಿನ ಕಿರದಳ್ಳಿ ತಾಂಡಾದ ಬಳಿಯಲ್ಲಿ ಎಗ್ಗಿಲ್ಲದೆ ಇಸ್ಪೀಟ್ ಆಟ ನಡೆಯುತ್ತಿದ್ದು ಇದನ್ನು ತಡೆಯುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ತಾಲೂಕು ಪ್ರಧಾನ ಸಂಚಾಲಕ ಶರಣಪ್ಪ ತಳವಾರಗೇರ ಒತ್ತಾಯಿಸಿದ್ದಾರೆ.

ಈ ಕುರಿತು ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿರುವ ಅವರು,ಕಿರದಳ್ಳಿ ತಾಂಡಾದಲ್ಲಿನ ಕೆಲ ವ್ಯಕ್ತಿಗಳು ಇಸ್ಪೀಟ್ ಆಟ ಆಡಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ,ಇಸ್ಪೀಟ್ ಆಟದ ಚಟಕ್ಕೆ ಬಿದ್ದಿರುವ ಅನೇಕರು ಮನೆ,ಜಮೀನು ಕಳೆದುಕೊಂಡಿದ್ದಾರೆ,ಅಲ್ಲದೆ ಇದರಿಂದಾಗಿ ಕಳ್ಳತನದಂತ ಘಟನೆಗಳು ಸಂಭವಿಸುತ್ತಿವೆ,ಇದರ ಕುರಿತು ಜನೆವರಿಯಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ,ಇದರಿಂದಾಗಿ ಇಸ್ಪೀಟ್ ಹಾವಳಿ ಮಿತಿಮೀರಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಇಸ್ಪೀಟ್ ಆಡಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here