ಕಲಬುರಗಿ: ನಗರದ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನದಲ್ಲಿ ನರಸಿಂಹ ದೇವರ ಜಯಂತಿ ನಿಮಿತ್ಯ ಮಹಾರಥೋತ್ಸವ ಭಕ್ತರ ಮದ್ಯ ನೆರವೇರಿತು.
ನರಸಿಂಹ ಜಯಂತಿಯಂದು ಶ್ರೀ ಕಿಶನರಾವ ಮಸಲೀಕರ ಅವರ ಕುಟುಂಬದಿಂದ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ರಾಮಾಚಾರ್ಯ ಘಂಟಿ, ಆನಂದತೀರ್ಥ ಆಚಾರ, ಭೀಮಸೆನ ಆಚಾರ, ಗುರುಮಧ್ವಾಚಾರ್ಯ, ರಘುತ್ತಮ್ ಘಂಟಿ, ಗಿರೀಶ ಗಲಗಲಿ, ಕೃಷ್ಣ ಲತುರಕರ, ಲಕ್ಷ್ಮರಾವ, ರಾಮೂರ್ತಿ, ನಂದು, ಕೃಷ್ಣ, ಶ್ರೀಪಾದ, ಶ್ರೀ ಹರಿ ವಿಠಲ ಜಯತೀರ್ಥ, ಸತ್ಯತ್ಮ ಸೇನೆಯ ಸದಸ್ಯರು, ಸತ್ಯಪ್ರಮೋದ ಯುವಕ ಸೇನೆಯ ಸದಸ್ಯರು, ಬಡಾವಣೆಯ ಮಹಿಳಾ ಭಜನಾ ಮಂಡಳಿ ಹಾಗೂ ಬಡಾವಣೆಯ ಭಕ್ತರು ಪಾಲ್ಗೊಂಡಿದ್ದರು.