ಚಿತ್ತಾಪುರ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0
38
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವ ಮಹತ್ವದ ಪರೀಕ್ಷೆಗಳು ಇಂಥಹ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೊರುತ್ತೇನೆ ಎಂದು ಪುರಸಭೆ ಸದಸ್ಯ ಜಗದೀಶ ಚವ್ಹಾಣ ಹೇಳಿದರು.

ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಂಡಾದ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದ ಅವರು, ತಮ್ಮ ಕೌಟುಂಬಿಕ ಅನಾನೂಕೂಲ ಇದ್ದರೂ ಕೂಡಾ ತಾಂಡಾದ ಕೆಲ ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದು ತಾಂಡಾಕ್ಕೆ ಕೀರ್ತಿ ತಂದಿದ್ದಾರೆ. ಅವರು ತಮ್ಮ ಮುಂದಿನ ಭವಿಷ್ಯದಲ್ಲಿ ಸರ್ಕಾರವು ನೀಡುತ್ತಿರುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಇನ್ನು ಹೆಚ್ಚು ಹೆಚ್ಚು ಅಂಕ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆ ತಾಂಡಾಕ್ಕೂ ಹೆಸರು ತರಬೇಕೆಂದು ಸೇವಾಲಾಲ್ ಮಹಾರಾಜರ ಆಶೀರ್ವಾದ ತಮ್ಮಗೆ ಸಿಗಲಿ ಎಂದು ಹಾರೈಸಿದರು.

Contact Your\'s Advertisement; 9902492681

ತಾಂಡಾದ ಮುಖಂಡರಾದ ವಿನೋದ ಪವಾರ್, ಗೊಪಿ ಬಾಮಲಾ ರಾಠೋಡ, ವಿಶ್ವನಾಥ ರಾಠೋಡ, ಜಗದೀಶ ಪವಾ‌ರ್, ವಾಸು ನಾಯಕ, ರೊಹನ್ ಜಾಧವ, ಅಂಬಾದಾಸ ಚವ್ಹಾಣ, ಅಪ್ಪು ಚವ್ಹಾಣ, ಲೊಕೇಶ ರಾಠೋಡ, ಅನಿಲ್ ರಾಠೋಡ, ಸತೀಶ ರಾಠೋಡ, ಪ್ರಕಾಶ ರಾಠೋಡ ಸೇರಿದಂತೆ ಮಕ್ಕಳ ಪಾಲಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here