ವ್ಯಕ್ತಿ ಕಾಣೆಯಾಗಿದ್ದಾನೆ

0
41

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಜಾವೀದ್ ಅಹ್ಮದ್ ಷಾ ದರ್ವೇಶ(23) ಎಂಬಾತ ಮನೆಯಿಂದ ಕೆಲಸಕ್ಕೆ ಹೊರಗೆ ಹೋದವನು ಕಾಣೆಯಾಗಿದ್ದಾನೆ.

ಜೂನ್ 2ರಂದು ಎಂದಿನಂತೆ ಜಾವೀದ್ ಅಹ್ಮದ್ ಷಾ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಶಹಾಬಾದ ನಗರದ ವಸಿಂ ಅಕ್ರಮ ಎನ್ನುವವರ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಲು ಹೋದವನು ಮನೆಗೆ ಬಂದಿರುವುದಿಲ್ಲ. ಗಾಬರಿಯಾದ ಹೆಂಡತಿ ಸನಾಬೇಗಂ ಹಾಗೂ ಮೈದುನ ಕಿರಾಣಿ ಅಂಗಡಿ ಮಾಲೀಕರಾದ ವಸಿಂ ಅಕ್ರಮ್ ಬಳಿ ಹೋಗಿ ವಿಚಾರಿಸಿದಾದ ಅವರು ವ್ಯಾಪಾರ ಹಣ ತರಲು ಸೇಡಂಗೆ ಕಳಿಸಿದ್ದೆ.ಅವನು ಹಣ ಕೊಟ್ಟು, ಶೌಚಕ್ರಿಯೆಗೆ ಹೋಗಿ ಬರುತ್ತೆನೆ ಎಂದು ಹೇಳಿ ಹೋದವನು ಬಂದಿರುವುದಿಲ್ಲ.

Contact Your\'s Advertisement; 9902492681

ಆ ನಂತರ ಕರೆ ಮಾಡಿರುವುದು ಪೋನ್ ಕರೆ ಸ್ವೀಕರಿಸಿರುವುದಿಲ್ಲ. ಅವನನ್ನು ನಗರದ ಎಲ್ಲಾ ಸ್ಥಳಗಳಲ್ಲಿ, ಆತನಿಗಾಗಿ ಹುಡುಕಾಟ ನಡೆಸುವುದರ ಜತೆಗೆ ಉಳಿದ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.ಆದ್ದರಿಂದ ನನ್ನ ಗಂಡನನ್ನು ಪತ್ತೆ ಮಾಡಿ ಕೊಡಬೇಕೆಂದು

ಪೆÇಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿರುವ ವ್ಯಕ್ತಿ ಕಂಡು ಬಂದರೆ 9480803570, 9008208508 ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here