ಸಾತನೂರು ರಸ್ತೆ ದುರಸ್ತಿಗೆ ಒತ್ತಾಯ

0
82
  • ಎಂ.ಡಿ‌ ಮಶಾಖ ಚಿತ್ತಾಪುರ

ಚಿತ್ತಾಪುರ: ಪಟ್ಟಣದ ನಾಗಾವಿ ದೇವಸ್ಥಾನದಿಂದ ಸಾತನೂರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ಅಪಾಯ ಸಂಭವಿಸುವ ಮುನ್ನ ದುರಸ್ತಿ ಮಾಡುವಂತೆ ರೈತ ಸಂಘದ ತಾಲೂಕ ಅಧ್ಯಕ್ಷ ಮೌನೇಶ್ ಭಂಕಲಗಾ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಪಟ್ಟಣದಿಂದ ಸಾತನೂರವರೆಗಿನ ರೈತರ ಜಮೀನುಗಳು ವ್ಯಾಪಿಸಿವೆ. ಹೀಗಾಗಿ ನೂರಾರು ರೈತರು ತಮ್ಮ ತಮ್ಮ ಹೊಲಗದ್ದೆಗಳಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನಗಳ ಮೂಲಕ ಸಾತನೂರ್, ಅಳ್ಳೋಳ್ಳಿ, ಭಂಕಲಗಿ, ಅಲ್ಲೂರ, ದಂಡಗುಂಡ ಗ್ರಾಮಗಳ ಜನರು ದಿನನಿತ್ಯ ಸಂಚರಿಸುವ ರಸ್ತೆಯಾಗಿದೆ.

Contact Your\'s Advertisement; 9902492681

ಇನ್ನೂ ಮೂರು ಕಿಲೋಮೀಟರ್ ದೂರದಲ್ಲಿ ಸಾತನೂರ ರಸ್ತೆಯಲ್ಲಿ ಸುಮಾರು ಒಂದು ಕಿಲೋ ಮೀಟರ್ ವರೆಗೂ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದರಿಂದ ಪ್ರಯಾಣಿಕರಿಗೆ, ರೈತರಿಗೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ಹೀಗಾಗಿ ಶೀಘ್ರವೇ ರಸ್ತೆ ದುರಸ್ತಿ ಕಾಮಗಾರಿ ಮಾಡಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here