ಸೆಪ್ಟೆಂಬರ್ 23 ರಂದು ಪ್ರಶಿಕ್ಷಣಾರ್ಥಿಗಳ ನಿಗರ್ಮನ ಪಥ ಸಂಚಲನ

0
54

ಕಲಬುರಗಿ: ಕಲಬುರಗಿ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ೯ನೇ ತಂಡದ ಡಿ.ಎಸ್.ಐ. (ಸಿವಿಲ್), 2ನೇ ತಂಡದ ಪಿ.ಎಸ್.ಐ. (ಗುಪ್ತವಾರ್ತೆ), ಪಿ.ಎಸ್.ಐ. (ಸಿ.ಐ.ಡಿ.) ಮತ್ತು 4ನೇ ತಂಡದ ಸ್ಪೇಷಲ್ ಆರ್.ಎಸ್.ಐ./ ಆರ್.ಎಸ್.ಐ. ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನವನ್ನು ಸೋಮವಾರ ಸೆಪ್ಟೆಂಬರ್ ೨೩ರಂದು ಬೆಳಿಗ್ಗೆ ೮ ಗಂಟೆಗೆ ಕಲಬುರಗಿ ಪಿ.ಟಿ.ಸಿ. ಕವಾಯತು ಮೈದಾನದಲ್ಲಿ ಜರುಗಲಿದೆ.

ರಾಜ್ಯದ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ, ಬಹುಮಾನ ವಿತರಿಸುವರು. ಬೆಂಗಳೂರಿನ ತರಬೇತಿಯ ಪೊಲೀಸ್ ಮಹಾನಿರ್ದೇಶಕರುಗಳಾದ ಪದಮ್‌ಕುಮಾರ ಗರ್ಗ್ ಹಾಗೂ ರವಿ ಎಸ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here