ಡಾ. ಫ. ಗು. ಹಳಕಟ್ಟಿಯವರ ಜಯಂತಿಯ ಪೂರ್ವಭಾವಿ ಸಭೆ

0
78

ಕಲಬುರಗಿ: 3ನೇ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಇಂದು ನಗರದ ಬಸವ ಮಂಟಪದಲ್ಲಿ ಡಾ. ಫ. ಗು. ಹಳಕಟ್ಟಿಯವರ ಜಯಂತಿ ಆಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಕೆಲವು ತಾತ್ಕಾಲಿಕ ನಿರ್ಣಯಗಳ ಮೂಲಕ ಜಯಂತಿಯ ಸಂಚಾಲಕರ ಉತ್ಸವ ಸಮಿತಿಯನ್ನು ರಚಿಸಲಾಯಿತು.

Contact Your\'s Advertisement; 9902492681

ರವೀಂದ್ರ ಶಾಬಾದಿ – ಮುಖ್ಯ ಸಂಚಾಲಕರು, ವಿನೋದ ಕುಮಾರ ಜೇನವೆರಿ -ಸಹ ಸಂಚಾಲಕರು,  ಪರಮೇಶ್ವರ ಶಾಟಕರ – ಸಹಾಯಕ ಸಂಚಾಲಕರು, ಅಯ್ಯಣ್ಣ ನಂದಿ -ಸಹಾಯಕ ಸಂಚಾಲಕರು, ಶಿವಲಿಂಗಪ್ಪ ಅಷ್ಟಗಿ -ಸಹಾಯಕ ಸಂಚಾಲಕರು, ಹಣಮಯ್ಯ ಆಲೂರ್ -ಸಹಾಯಕ ಸಂಚಾಲಕರು, ಶಿವರಾಜ ಅಂಡಗಿ -ಸಹಾಯಕ ಸಂಚಾಲಕರು ನೇಮಕ ಮಾಡಲಾಯಿತು.

25 ರಂದು ಸಂಜೆ 5 ಗಂಟೆಗೆ ಬಸವ ಮಂಟಪದಲ್ಲಿ ಮುಂದಿನ ಸಭೆಯನ್ನು ಆಯೋಜಿಸುವುದಾದ್ದು, ಈ ಸಭೆಯಲ್ಲಿ ಮಹಾನಗರದ ಎಲ್ಲಾ ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣಪರ ಒಕ್ಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಫ. ಗು. ಹಳಕಟ್ಟಿ ಜಯಂತಿ ಉತ್ಸವ ಸಮಿತಿಯ ಸಹ- ಸಂಚಾಲಕ ಹಾಗೂ ನ್ಯಾಯವಾದಿ ಜೆ. ವಿನೋದ ಕುಮಾರ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here