ಬೆಂಗಳೂರ ನಿರ್ಮಾತೃ ಕೆಂಪೇಗೌಡ ಹೆಸರು ಅಜಾರಾಮರ

0
11

ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು.

ನಗರದ ತಹಸಿಲ್ದಾರ ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ ದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೆಂಪೇಗೌಡ ಅವರು ಈ ನಾಡು ಕಂಡ ಒಬ್ಬ ಅಭಿವೃಧ್ಧಿ ಶೀಲ ಅರಸರಾಗಿದ್ದು,ಅವರ ಹೆಸರು ಈ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.ಅಲ್ಲದೆ ಅವರ ಇತಿಹಾಸವನ್ನು ಎಲ್ಲಾ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಸಿಆರ್‍ಪಿ ನಿಂಗಣ್ಣ ಗೋನಾಲ ಮಾತನಾಡಿ,ನಾಡಪ್ರಭು ಕೆಂಪೇಗೌಡ ಅವರು ಸಾಮಂತ ಅರಸರಾಗಿ 46 ವರ್ಷಗಳ ಕಾಲ ಆಡಳಿತ ನಡೆಸಿದ್ದು,ಅವರೊಬ್ಬ ಸಮಾನತೆಯ ಪರವಾದ ಅರಸರಾಗಿದ್ದರು,ಅಂದು ಬೆಂದಕಾಳೂರಾಗಿದ್ದ ಈಗಿನ ಬೆಂಗಳೂರು ವಿಶ್ವವಿಖ್ಯಾತವಾಗಲು ಅದಕ್ಕೆ ಕೆಂಪೇಗೌಡರ ಕೊಡುಗೆ ದೊಡ್ಡದಿದೆ.ಮೊದಲು ಮಾಗಡಿ ರಾಜಧಾನಿ ಮಾಡಿಕೊಂಡಿದ್ದ ಅವರು ನಂತರ ಬೆಂಗಳೂರನ್ನು ತಮ್ಮ ರಾಜಧಾನಿ ಮಾಡಿಕೊಂಡರು,ಬೆಂಗಳೂರಲ್ಲಿನ ಅನೇಕ ಉದ್ಯಾನವನ,ಮಂದಿರಗಳನ್ನು ಕಟ್ಟಿಸಿದರು,4 ಭವ್ಯವಾದ ದ್ವಾರಬಾಗಿಲು ಕಟ್ಟಿಸಿದರು.54 ಪೇಟೆಗಳನ್ನು ಕಟ್ಟಿಸಿದ್ದಾರೆ.ಅಲ್ಲದೆ 14 ಕೆರೆಗಳನ್ನು ಕಟ್ಟಿಸಿ ಕೃಷಿಗೆ ಒತ್ತು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.ಇಂತಹ ಮಹಾನ್ ಅರಸನನ್ನು ಯಾವುದೇ ಕಾರಣಕ್ಕೂ ಒಂದು ಜಾತಿಗೆ ಸೀಮಿತಗೊಳಿಸದೆ,ಅವರು ನಮ್ಮವರು,ನಮ್ಮ ಕನ್ನಡಿಗರು ಎನ್ನುವ ಹೆಮ್ಮೆ ಎಲ್ಲರದಾಗಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು,ನಂತರ ಕೆಂಪೇಗೌಡರ ಕುರಿತ ಪ್ರಬಂಧ,ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.ನಂತರ ಉಪ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕರ್ ಮಾತನಾಡಿದರು,ಕಾರ್ಯಕ್ರಮದ ವೇದಿಕೆಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಮನಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ಸಾಬರಡ್ಡಿ ಇಟಗಿ ಸ್ವಾಗತಿಸಿ,ನಿರೂಪಿಸಿದರು,ತಹಸಿಲ್ದಾರ್ ಕಚೇರಿ ಸಿರಸ್ತೆದಾರ ಚನ್ನಬಸವ ಚಲವಾದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದಣಗೌಡ ಹೆಬ್ಬಾಳ,ಸಿದ್ದನಗೌಡ ಹಂದ್ರಾಳ,ಶರಣು ಮುಧೋಳ,ರವಿಗೌಡ ಹೆಮನೂರ,ಚನ್ನಪ್ಪಗೌಡ ಜಕ್ಕನಗೌಡರ್,ಪ್ರದೀಪ ಕದರಾಪುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here