ಕಲಬುರಗಿ: ನಗರದ ವಾರ್ಡ ನಂ 6 ರಲ್ಲಿ ಬರುವ ಚೆನ್ನವೀರ ಬಡಾವಣೆಯಲ್ಲಿ ಕೆಕೆಆರ್.ಡಿಬಿ ಅನುದಾನದಲ್ಲಿ ಕೆ.ಆರ್.ಐ.ಡಿ.ಎಲ್. ನಿಂದ ಕಾಮಗಾರಿ ಉದ್ಯಾನವನವು 2023ರಲ್ಲಿ ಆರಂಭಿಸಿರುದರಿಂದ ಬಗ್ಗೆ 25 ಲಕ್ಷ ರೂಪಾಯಿ ನಿಂದ ನಿರ್ಮಿಸಿರುವ ಉದ್ಯಾನವನವು ಪೂರ್ತಿಯಾಗಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಉತ್ತರ ವಲಯದ ವತಿಯಿಂದ ಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ್ದರು.
25 ವರ್ಷಗಳ ಹಿಂದೆ ಕಟ್ಟಿರುವ ಗೋಡೆ ಹಗೂ ಗ್ರೀಲ್ ಗೆ ಸುಣ್ಣ ಮತ್ತು ಬಣ್ಣ ಹಚ್ಚಿರುತ್ತಾರೆ.ಈ ಕಾಮಗಾರಿಯೂ ಪೂರ್ತಿಯಾಗಿ ಇನ್ನೂ ಮುಗಿದಿಲ್ಲ. ಕೂಡಲೇ ಇದನ್ನು ಇಲ್ಲಿಗೆ ನಿಲ್ಲಿಸಿ ಕಳಪೆ ಕಾಮಗಾರಿ ಮಾಡಿರುವವರ ಮೇಲೆ ಸೂಕ್ತ ತನಿಖೆ ನಡೆಸಿ ಕಾಮಗಾರಿ ಮಾಡಿರುವವರ ವಿರುದ್ಧ 15 ದಿನಗಳಲ್ಲಿ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ತಮ್ಮ ಕಛೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸಚೀನ ಎಸ್ ಫರಹತಾಬಾದ, ಉತ್ತರ ವಲಯದ ಅಧ್ಯಕ್ಷ ಸುರೇಶ ಹನಗುಡಿ, ಅಂಬರಾಯ ಅಷ್ಟಗಿ, ಸುರೇಶ ಬೆಳಕೋಟಿ, ಅಕ್ಷಯ, ವಿಕಾಸ, ಪ್ರವೀಣ, ಸಿದ್ದಾರ್ಥ, ಸಚೀನ, ಸಿದ್ದು, ಪ್ರಮೋದ ಸೇರಿದಂತೆ ಇತರರು ಇದ್ದರು.