ಕಲಬುರಗಿ: ತಾಲೂಕಿನ ಇಟಗಾ ಗ್ರಾಮದ ಹಿಂದೂ ಕಾರ್ಯಕರ್ತನಾದ ಭೀಮು ದಾಸರ ಇವರ ಮೇಲೆ ಅನ್ಯ ಕೋಮಿನ ಜನ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ವತಿಯಿಂದ ನಗರದ ಎಸ್ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ನಗರ ಪೆÇೀಲಿಸ ಆಯುಕ್ತರಿಗೆ ಮನವಿ ಸಲ್ಲಿಸಿದರು.
ದಿನಾಂಕ 1 ರಂದು ತಾಲೂಕಿನ ಇಟಗಾ(ಅ) ಗ್ರಾಮದಲ್ಲಿ ಮದುವೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶ್ರೀ ರಾಮನ ಹಾಡುಗಳನ್ನು ಹಾಕಿ ನೃತ್ಯ ಮಾಡುತ್ತಿರುವ ಸಮಯದಲ್ಲಿ ಅನ್ಯ ಕೋಮಿನ ವ್ಯಕ್ತಿಗಳು ನಮ್ಮ ಹಿಂದೂ ಕಾರ್ಯಕರ್ತನಾದ ಭೀಮು ದಾಸರ ಇವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದನ್ನು ನಮ್ಮ ಸಂಘಟನೆಯು ಖಂಡಿಸುತ್ತದೆ ಎಂದರು.
ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಅನ್ಯ ಕೋಮಿನ ಜನರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತು ನಮ್ಮ ಹಿಂದೂ ಕಾರ್ಯಕರ್ತನ ಮೇಲೆ ಮಾಡಿರುವ ಹಲ್ಲೆಗೆ ಸೂಕ್ತ ಚಿಕ್ಸಿತೆ ಒದಗಿಸುವುದರ ಜೊತೆಗೆ ಅವರ ಕುಟುಂಬಕ್ಕೆ ಸೂಕ್ತ ಪೆÇೀಲೀಸ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ, ಮಹೇಶ ಗೋಬ್ಬೂರ, ಅಂಬು ಕಂಬಾರಾಯ, ರಾಕೇಶ ಜಮಾದಾರ, ಸತ್ಯಪ್ರಮೋದ ನವಲೆ, ಗಂಗಾಧರ ಹಲಬಾ, ವಿಠ್ಠಲ ಕುಲಕರ್ಣಿ, ಗೀರಿಶ ಕುಲಕರ್ಣಿ, ನಾರಾಯಣ ಜಾಗೀರದಾರ, ಪ್ರಜ್ವಲ ಮಾಲೀಪಾಟೀಲ, ಪ್ರಜ್ವಲ ಕುಲಕರ್ಣಿ, ರಾಕೇಶ ಜಮಾದಾರ, ಯಲ್ಲು ನಾಯಕ, ಆಕಾಶ ಗೌಡರ, ಅಂಬರೀಶ ಗುತ್ತೇದಾರ, ಭೀಮಾಶಂಕರ ದಾಸರ,ಆಕಾಶ ನಾಯಕ, ಭೀಮಾಶಂಕರ ನಾಯಕ, ಬಸವರಾಜ ನಾಯಕ, ಸುವನ ಸಿದ್ಧಾರ್ಥ, ಯಶ್ವಂತ ಮಳ್ಳಿ ಸೇರಿದಂತೆ ಇತರರು ಇದ್ದರು.