- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ಪಟ್ಟಣದ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ನಾಗರಾಜ ಭಂಕಲಗಿ, ಗೌರವಾಧ್ಯಕ್ಷರಾಗಿ ಲಿಂಗಾರೆಡ್ಡಿಗೌಡ ನಾಲವಾರ, ಕಾರ್ಯಕಾರಿ ಸಮಿತಿ ಪುರುಷ ಸ್ಥಾನಕ್ಕೆ ಚಂದ್ರಶೇಖರ ಬಳ್ಳಾ, ಪ್ರಸಾದ ಅವಂಟಿ, ಬಸವರಾಜ ಪಾಟೀಲ್, ರವೀಂದ್ರ ಸಜ್ಜನಶೆಟ್ಟಿ, ಪ್ರಕಾಶ ಹಂಚಿನಾಳ, ಶಾಂತಣ್ಣ ಚಾಳಿಕಾರ, ಆನಂದ ಪಾಟೀಲ್, ಮಲ್ಲರೆಡ್ಡಿ ಗೋಪಸೇನ್, ಈಶ್ವರ ಬಾಳಿ, ಬಸವರಾಜ ಕಿರಣಗಿ, ವಿಶ್ವರಾಧ್ಯ ನೆನಕ್ಕಿ, ಸೋಮಶೇಖರ, ಬಸವರಾಜ ಸಂಕನೂರ, ಕಾರ್ಯಕಾರಿ ಸಮಿತಿ ಮಹಿಳಾ ಸ್ಥಾನಕ್ಕೆ ವೆಂಕಟಮ್ಮ ಪಾಲಪ್, ಕಮಲಾ ಟೋಕಾಪುರ, ರೇಣುಕಾ ಝಳಕಿ, ನಿರ್ಮಲಾ ಭಂಗಿ, ಲಕ್ಷ್ಮೀಬಾಯಿ ಹತ್ತಿ, ಮಂಜುಳಾ ಹೂಗಾರ, ಲಕ್ಷ್ಮೀಬಾಯಿ ಮಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.
ಇದೇ ವೆಳೆ ನೂತನ ಪದಾಧಿಕಾರಿಗಳಿಗೆ ವೀರಶೈವ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅನೇಕ ಮುಖಂಡರು, ಅಭಿಮಾನಿಗಳು ಸೇರಿದಂತೆ ಇತರರು ಇದ್ದರು.