ಕನ್ನಡ-ಕನ್ನಡಿಗ-ಕರ್ನಾಟಕ ಚಿಂತನಾಗೋಷ್ಠಿ 16 ರಂದು

0
141

ಕಲಬುರಗಿ: ನಾಡು-ನುಡಿ, ನೆಲ-ಜಲಗಳ ಸಂರಕ್ಷಣೆ ಹಾಗೂ ಭಾಷಾ ಸಂಸ್ಕøತಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಇಂದು ನಾವು ಪರಭಾಷಾ ವ್ಯಾಮೋಹಕ್ಕೊಳಗಾಗಿ ಮಾತೃಭಾಷೆಯಿಂದ ದೂರಾಗುತ್ತಿರುವ ಮನಸ್ಸುಗಳು ಕೂಡ ಹೆಚ್ಚಾಗಿವೆ. ಈ ದಿಸೆಯಲ್ಲಿ ಕನ್ನಡಿಗರ ಅಸ್ಮಿತೆಯ ಪ್ರಶ್ನೆ ಕಾಡುತ್ತಿರುವ ಇಂದಿನ ವರ್ತಮಾನದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ವರ್ತಮಾನದ ಒಂದು ಚಿಂತನ ಮಂಥನ ಮಾಡುವ ಪ್ರಸ್ತುತತೆ ಹೆಚ್ಚಾಗಿದೆ.

ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಜಂಟಿ ಆಶ್ರಯದಲ್ಲಿ ಜುಲೈ 16 ರ ಮಂಗಳವಾರದಂದು ಬೆಳಗ್ಗೆ 9.45 ಕ್ಕೆ ನಗರದ ಕನ್ನಡ ಭವನದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ವರ್ತಮಾನದ ಒಂದು ಚಿಂತನೆ ಎಂಬ ವಿಚಾರಗೋಷ್ಠಿಯೊಂದನ್ನು ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

Contact Your\'s Advertisement; 9902492681

ಅನ್ನದ ಭಾಷೆಯಾದ ಕನ್ನಡ ಸೊರಗುತ್ತಿದೆ. ಕನ್ನಡಿಗರ ಹೃದಯದ ಶ್ರೀಮಂತಿಕೆ ನಮ್ಮ ಪರಂಪರೆ ಮತ್ತು ಮೌಲ್ಯದ ಮೇಲಿದೆ. ತಾಂತ್ರಿಕ ಜೀವನದೊಂದಿಗೆ ಬದುಕುತ್ತಿರುವ ಈ ಸಂದರ್ಭದಲ್ಲಿ ಭಾಷೆಯ ಜೀವಂತಿಕೆ ಉಳಿಸಿ ಬೆಳೆಸುವುದು ತುಂಬಾ ಮುಖ್ಯವಾಗಿದೆ. ಕನ್ನಡಿಗರಾದ ನಾವುಗಳು ಕೆಲ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಎಡವಿದ್ದೇವೆ. ಕನ್ನಡಿಗರ ಮನಸ್ಸುಗಳನ್ನು ಕಟ್ಟುವ ಕಾರ್ಯ ಈ ನೆಲದಲ್ಲಿ ಆಗಬೇಕಾಗಿದೆ.

ಅದಕ್ಕಾಗಿ ಪರಿಷತ್ತು ಇಂಥ ಚಿಂತನಾಗೋಷ್ಠಿಯನ್ನು ಏರ್ಪಡಿಸುವ ಮೂಲಕ ಕನ್ನಡ ಸಾರಸ್ವತ ಲೋಕ ಗಟ್ಟಿಯಾಗಿ ನಿಲ್ಲಲು ಶ್ರಮಿಸುತ್ತಿದೆ. ಜತೆಗೆ ಸಾಂಸ್ಕøತಿಕ ನೆಲೆಗಟ್ಟನ್ನು ಸ್ಥಾಪಿಸಲು ಸದಾ ಕ್ರಿಯಾಶೀಲವಾಗಿದೆ ಎಂದು ಅವರು ವಿವರಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ. ಶಿವಾನಂದನ್, ಡಾ. ಸುನಿತಾ ಬಿ ಪಾಟೀಲ, ಶಿವರಾಜ ಅಂಡಗಿ, ಶರಣರಾಜ್ ಛಪ್ಪರಬಂದಿ ಅವರುಗಳು ಉಪಸ್ಥಿತರಿರುವರು ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here