ಸುರಪುರ:ಆಹಾರ ಇಲಾಖೆ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಕರವೇ ಮನವಿ

0
33

ಸುರಪುರ: ಇಲ್ಲಿಯ ತಹಸಿಲ್ದಾರ್ ಕಚೇರಿಯಲ್ಲಿನ ಆಹಾರ ಇಲಾಖೆ ನಿರೀಕ್ಷಕರ ಕಚೇರಿಯಲ್ಲಿನ ಆನ್‍ಲೈನ್ ಬಂದ್ ಇಡಲಾಗಿದ್ದು,ಸಾರ್ವಜನಿಕರಿಗೆ ವೆಬ್ ಸೈಟ್ ಬಂದಾಗಿದೆ ಎಂದು ಸುಳ್ಳು ಹೇಳಿ ಈ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಖಾಸಗಿಯವರಾಗಿದ್ದು ಅವರು ತಮ್ಮ ಆನ್‍ಲೈನ್ ಕೇಂದ್ರಕ್ಕೆ ಬರುವಂತೆ ತಿಳಿಸುತ್ತಾರೆ.

ಇದರಿಂದ ಸರಕಾರದ ಸೇವೆಯ ಬದಲಾಗಿ ಜನರು ಖಾಸಗಿ ಆನಲೈನ್ ಕೇಂದ್ರಗಳಿಗೆ ಹೋಗಿ ತಮ್ಮ ರೇಷನ್ ಕಾರ್ಡ್ ತಿದ್ದುಪಡಿ,ರೇಷನ್ ಕಾರ್ಡ್‍ನಲ್ಲಿ ಹೆಸರು ಸೇರ್ಪಡೆ ಅಥವಾ ಹೆಸರು ತೆಗೆಯಿಸಲು ಹೆಚ್ಚಿನ ಹಣ ನೀಡುವಂತಾ ಸ್ಥಿತಿ ಎದುರಾಗಿದೆ,ಇದಕ್ಕೆ ಆಹಾರ ಇಲಾಖೆಯ ನಿರೀಕ್ಷಕರೆ ಕಾರಣರಾಗಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಕಚೇರಿಯಲ್ಲಿನ ಖಾಸಗಿ ಕಂಪ್ಯೂಟರ್ ಆಪರೇಟರ್ ಅವರನ್ನು ತೆಗೆದು ಸರಕಾರದ ಆಪರೇಟರ್‍ನ್ನು ನೇಮಕಗೊಳಿಸಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ,ತಹಸಿಲ್ದಾರ್ ಕೆ.ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸಂಜೀವ ನಾಯಕ ದರಬಾರಿ,ಚಂದ್ರಕಾಂತ ಲಕ್ಷ್ಮೀಪುರ,ಕುಮಾರಗೌಡ ಪೊಲೀಸ್ ಪಾಟೀಲ್,ಕಾಸಿಂಸಾಬ ದೊಡ್ಮನಿ,ಹಣಮಂತ್ರಾಯ ಭಜಂತ್ರಿ,ಕಾಸಿಂಸಾಬ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here