ವಿಜಯಪುರ: ಭೀಮಾತೀರದ ಕುಖ್ಯಾತಿಯ ಭಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಬಳಿಯ ಎನ್ಎಚ್13 ರಲ್ಲಿ ಅಪಘಾತ ಸಂಭವಿಸಿದ್ದು ಮಹೀಂದ್ರಾ ಎಕ್ಸಯೂ ಹಾಗೂ ಗೂಡ್ಸ್ ವಾಹನದ ಮಧ್ಯೆ ಅಪಘಾತ ನಡೆದಿದೆ.
ಎಕ್ಸ್ ಯೂ ವಾಹನದಲ್ಲಿದ್ದ ಬಾಗಪ್ಪ ಪತ್ನಿ ಶೋಭಾ ಭಜಂತ್ರಿ 45 ಸ್ಥಳದಲ್ಲಿಯೇ ಸಾವನ್ನಪ್ಪಿದು ಎಕ್ಸ್ ಯೂ ವಾಹನ ಚಾಲಕ ಹಾಗೂ ಗೂಡ್ಸ್ ವಾಹನ ಚಾಲಕರಿಗೆ ಗಾಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ . ಚಿಕ್ಕೋಡಿಯ ಪ್ರಧಾನ ನ್ಯಾಯಾಲದಲ್ಲಿ ಎಪಿಪಿ ಆಗಿದ್ದಳು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ಮರಣೋತ್ತರ ಪರೀಕ್ಷೆಗಾಗಿ ಶೋಭಾ ಶವ ಹೊರ್ತಿ ಸರ್ಕಾರಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ .ಅಸ್ಪತ್ರೆಗೆ ಬಾಗಪ್ಪ ಹರಿಜನ ಹಾಗೂ ಸಂಗಡಿಗರು ಆಗಮಿಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .