ಬಿಸಿ ಬಿಸಿ ಸುದ್ದಿ

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು ಲೇಖಕ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಹುಲಿಕುಂಟೆ ಮೂರ್ತಿ ತಿಳಿಸಿದ್ದಾರೆ.

ಯುವಮುನ್ನಡೆ ವತಿಯಿಂದ ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವೃಷಭಾವತಿ ನದಿ ಉಳಿವಿಗಾಗಿ ಹಾಗೂ ಪರಿಸರ ನ್ಯಾಯಕ್ಕಾಗಿ ಯುವಧ್ವನಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೃಷಭಾವತಿ ನದಿಯ ದಡದಲ್ಲಿ ಬೆಂಗಳೂರು ನಿರ್ಮಾಣವಾಗಿದೆ. ವೃಷಭಾವತಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ಆದರೆ, ಈ ವಿಚಾರ ಎಷ್ಟು ಮಂದಿಗೆ ಗೊತ್ತಿರಲು ಸಾಧ್ಯ. ಇಂದು ಆಧುನಿಕತೆ ಹಾಗೂ ಜಾಗತೀಕರಣಕ್ಕೆ ತುತ್ತಾಗಿರುವ ಬೆಂಗಳೂರಿನಲ್ಲಿ ನದಿಮೂಲಗಳು ಕಾಣೆಯಾಗಿವೆ. ಇದಿರಂದಾಗಿ ಬೆಂಗಳೂರಿನಲ್ಲಿ ನೀರಿಗೆ, ಪರಿಸರಕ್ಕೆ ಸಂಬಂಧಿಸಿದಂತೆ ಏನೆಲ್ಲ ಸಮಸ್ಯೆಗಳಾಗುತ್ತಿವೆ ಎಂಬುದರ ಕುರಿತು ನಿಧಾನವಾಗಿ ಅರಿವಿಗೆ ಬರುತ್ತದೆ. ಈ ವಿಚಾರವನ್ನು ಯುವಜನತೆಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ನದಿಗಳಿಗೆ, ಪರಿಸರಕ್ಕೆ ಪರ್ಯಾಯವನ್ನು ಹುಡುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ಬಗ್ಗೆ ಯುವಮುನ್ನಡೆಯ ಕಾರ್ಯಕರ್ತರು, ವೃಷಭಾವತಿ ನದಿ ಉಳಿವಿಗಾಗಿ ಅಭಿಯಾನವನ್ನು ಆರಂಭಿಸಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಅಭಿಯಾನಕ್ಕೆ ಬೆಂಗಳೂರಿನ ಎಲ್ಲ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ಅವರು ಆಶಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಾತಲಿಂಗಪ್ಪ, ಸಂವಾದ ಸಂಸ್ಥೆಯ ಇಳಂಗೊ ಸ್ಟಾನಿಸ್ಲಾಸ್ ಹಾಗೂ ಯುವಮುನ್ನಡೆ ಕಾರ್ಯಕರ್ತರಾದ ಉದಯ್‌ಕಿರಣ್, ಶ್ರೀನಿವಾಸ್, ಅರ್ಪಿತಾ, ಮರಿಯಮ್ಮ, ಯೋಗೇಶ್, ಆಶಾ, ಬೀರಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

emedialine

Recent Posts

ಚಳವಳಿ, ಹೋರಾಟದಿಂದಲೇ ದಲಿತ ಸಾಹಿತ್ಯ ಉದಯ: ದಲಿತ ಚಳವಳಿ ಸಾಹಿತ್ಯ ಸಮ್ಮೇಳನ

ಕಲಬುರಗಿ: ದಲಿತ, ಹಿಂದುಳಿದವರು, ದೀನರು ಎಂದು ಹೇಳಿಕೊಂಡು ಎಷ್ಟು ದಿನ ಅಂತಾ ಜೀವನ ಸಾಗಿಸಬೇಕು. ಸಾಧನೆ ಮಾಡಿ ಸಾಧಕರಾಗಿ ಸಾಯೋಣ.…

16 hours ago

ಕಲಬುರಗಿ ಪ್ರವಾಸಿ ತಾಣಗಳ ಆಯ್ಕೆಗೆ ಆನ್‌ಲೈನ್‌ ಮೂಲಕ ವೋಟ್‌ ಮಾಡಲು ಡಿ.ಸಿ. ಮನವಿ

ಕಲಬುರಗಿ: ಕೇಂದ್ರದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಾರ್ವವಜನಿಕರು ಮತ್ತು ಪ್ರವಾಸಿಗರೆ ಪ್ರವಾಸೋದ್ಯಮ ತಾಣಗಳನ್ನು ಆಯ್ಕೆ…

17 hours ago

ಎರಡನೇ ದಿನದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಹೋರಾಟದ ಸಾಗರಕ್ಕೆ ಡಾ. ಡಿ.ಜಿ. ಸಾಗರ ಅವರ ಮಹಾ ಸಾಗರವೇ ಆಗಿದ್ದಾರೆ. ನೋವು, ಅವಮಾನ ಸಹಿಸಿ ಬಹು ಎತ್ತರಕ್ಕೆ…

17 hours ago

ಶ್ರೀ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ನಾಳೆ

ಕಲಬುರಗಿ: ಧಾರ್ಮಿಕ ದತ್ತಿ ಇಲಾಖೆಯ ಕಾಳಗಿ ತಾಲ್ಲೂಕಿನ ರೇವಗ್ಗಿ ರಟಕಲ್ ಶ್ರೀ ರೇವಣಸಿದ್ದೇಶ್ವರ ಗುಡ್ಡದಲ್ಲಿ ನಾಳೆ ಶ್ರಾವಣ ಮಾಸದ ನಡುವಿನ…

19 hours ago

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ

ಕಲಬುರಗಿ; ನಗರದ ಎಐಟಿಸಿ ಕಚೇರಿಯ ಹತ್ತಿರದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (CPI) ನಗರ ಹಾಗೂ ತಾಲ್ಲೂಕಾ ಸಮಾವೇಶ…

19 hours ago

ಬೂಟು ಧರಿಸಿ ಧ್ವಜಾರೋಹಣ ಮಾಡಿದ ಶಿಕ್ಷಕನ ಅಮಾನತಿಗೆ ಆಗ್ರಹ

ಸುರಪುರ: ಆಗಷ್ಟ್ 15 ರಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಸರಕಾರಿ ಹಿರಿಯ…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420