ವಾರ್ಡ ಮಟ್ಟದ ಜನಸ್ಪಂದನ ಕಾರ್ಯಕ್ರದಲ್ಲಿ ರಸ್ತೆ ಸಂಪರ್ಕ ಮಾಡಿಕೊಡಲು ಒತ್ತಾಯ

0
86

ಶಹಾಬಾದ: ನಗರದ ವಾರ್ಡ ನಂ. 11ರಿಂದ 13ರ ವರೆಗಿನ ವಾಸಿಸುತ್ತಿರುವ ನಿವಾಸಿಗಳಿಗೆ ರಸ್ತೆಯ ಸಂಪರ್ಕ ಇಲ್ಲದಿರುವುದರಿಂದ ಸಂಪರ್ಕ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಕಾಂಗ್ರೆಸ್ ಯುವ ಅಧ್ಯಕ್ಷ ಕಿರಣ್ ಚವ್ಹಾಣ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಅವರು ನಗರದ ವಾರ್ಡ ನಂ. 11ರಿಂದ 13ರ ವರೆಗಿನ ಜನರ ಸಮಸ್ಯೆಗಳನ್ನು ಅರಿಯಲು ಆಯೋಜಿಸಲಾದ ವಾರ್ಡ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ದಶಕಗಳಿಂದ ಇಲ್ಲಿನ ಜನರಿಗೆ ರೇಲ್ವೆ ಹಳಿ ದಾಟಿ ಬರಲು ಸಾಕಷ್ಟು ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು ಹಾಗೂ ಹಿರಿಯರು ಹಳ ದಾಟುವ ಸಂದರ್ಭದಲ್ಲಿ ಅಪಘಾತಗೊಳಗಾಗಿದ್ದಾರೆ.ಆದ್ದರಿಂದ ಮೇಲ್ಸೇತುವೆ ನಿರ್ಮಾಣ ಮಾಡಿ ಕೊಡಬೇಕು.ಇಲ್ಲದಿದ್ದರೇ ನಿಜಾಮ ಬಜಾರ ಮೂಲಕ ರಸ್ತೆ ನಿರ್ಮಾಣ ಮಾಡಿ ಕೊಟ್ಟು ಇಲ್ಲಿನ ಜನರ ಬಹುದಿನಗಳ ಕನಸು ನನಸು ಮಾಡಬೇಕೆಂದು ಹೇಳಿದರು.

ವಾರ್ಡ ನಂ.12ರಲ್ಲಿ ಉದ್ಯಾನವನ ಇದೆ. ಆದರೆ ಒಂದು ಗಿಡಮರಗಳಿಲ್ಲ. ಯಾವುದೇ ಸೌಲಭ್ಯಗಳಿಲ್ಲದೇ ಹಾಳಾಗಿದೆ.ಆದ್ದರಿಂದ ಕೂಡಲು ಆಸನದ ವ್ಯವಸ್ಥೆ, ಲೈಟ್ ವ್ಯವಸ್ಥೆ ಹಾಗೂ ಗಿಡಮರಗಳನ್ನು ಬೆಳೆಸಿ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಹನುಮಾನ ಮಂದಿರ ಎದುಗಡೆ ಇರುವ ಹೈಮಾಸ್ಟ ದೀಪ ಉರಿಯುತ್ತಿಲ್ಲ. ಕತ್ತಲಲ್ಲೆ ಜನರು ಓಡಾಡುತ್ತಿದ್ದಾರೆ.ಅದನ್ನು ದುರಸ್ತಿ ಮಾಡಿಸಿಕೊಡಬೇಕು. ಇಲ್ಲಿ ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರಿಗೆ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.ಆದ್ದರಿಂದ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣವಾಗಬೇಕು. ವಾರ್ಡ ನಂ.11ರಿಂದ 13ರ ವರೆಗಿನ ನಿವಾಸಿಗಳಿಗೆ ಕುಡಿಯುವ ಶುದ್ಧ ನೀರು ಪಡೆಯಲು ಶುದ್ಧಿಕರಣ ಘಟಕ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.

ನಂತರ ಮಾತನಾಡಿದ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಸಾರ್ವಜನಿಕರ ಸಮಸ್ಯೆಗಳನ್ನು ಅರಿಯಲೇಂದೇ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರ ಸಮಸ್ಯೆಯನ್ನು ಕೇಳಿದ್ದೆವೆ.ಈ ನಿಟ್ಟಿನಲ್ಲಿ ನಗರಸಭೆಯಿಂದ ಯಾವ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೆವೆ ಎಂದರು.

ಎಇಇ ಶರಣು ಪೂಜಾರ, ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here