ಶಹಾಬಾದ: ಹಣ ದೋಚಿದ ಕಳ್ಳಿಯರಿಬ್ಬರ ಬಂಧನ

0
244

ಶಹಾಬಾದ: ನಗರದ ಕೆನರಾ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುವಾಗ ಬ್ಯಾಗ್ ಕಟ್ ಮಾಡಿ ಹಣದ ಬ್ಯಾಗ್ ದೋಚಿದ ಇಬ್ಬರು ಕಳ್ಳಿಯರನ್ನು ನಗರದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ದಕ್ಕಾ ತಾಂಡಾದ ಪೂನಮ್/ದೀಯಾ ಕೃಷ್ಣ ಕಾಂಬ್ಳೆ (22) ಹಾಗೂ ಕಿರಣ್ ಗಣಪತಿ ಸಕಟ್ (27) ಬಂಧಿತ ಆರೋಪಿಗಳು.

Contact Your\'s Advertisement; 9902492681

ಜುಲೈ 15 ರಂದು ಮಧ್ಯಾಹ್ನ ನಗರದ ಬಂಕಟಚಾಳದ ನಿವಾಸಿ ತಾಹೇರಾಬಿ ಹುಸೇನಸಾಬ ಕೆನರಾ ಬ್ಯಾಂಕಿನಿಂದ 50 ಸಾವರ ರೂ.ಯನ್ನು ಬ್ಯಾಂಗನಲ್ಲಿಟ್ಟುಕೊಂಡು ಹೋಗುತ್ತಿದ್ದಾಗ, ಯಾರೋ ಇಬ್ಬರು ಅಪರಿಚಿತ ಮಹಿಳೆಯರು ಬ್ಯಾಗ್ ಕಟ್ ಮಾಡಿ ಹಣದ ಬ್ಯಾಗ್ ದೋಚಿಕೊಂಡು ಹೋಗಿದ್ದರು. ಈ ಕುರಿತು ತಾಹೇರಾಬಿ ಹುಸೇನಸಾಬ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ, ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಪತ್ತೆ ಹಚ್ಚಲು ಜಿಲ್ಲಾ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರು ಎಸ್‍ಪಿ ಶ್ರೀನಿಧಿ, ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಪಿಐ ನಟರಾಜ ಲಾಡೆ, ಪಿಎಸ್‍ಐಗಳಾದ ಚಂದ್ರಕಾಂತ ಮಕಾಲೆ, ಶಾಮರಾಯ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದೊಡ್ಡಪ್ಪ, ಬಸವರಾಜ,ಸಂತೋಷ, ಹುಸೇನಪಾಷಾ, ಶ್ರೀಕಾಂತ,ಹಂಪಮ್ಮ ಅವರ ತಂಡ ತನಿಖೆ ನಡೆಸಿ ದಕ್ಕಾ ತಾಂಡಾದ ಪೂನಮ್/ದೀಯಾ ಕೃಷ್ಣ ಕಾಂಬ್ಳೆ ಹಾಗೂ ಕಿರಣ್ ಗಣಪತಿ ಸಕಟ್, ಹೈದ್ರಬಾದನ ಹಾವ ದಮನ ಗುಡ್ಡಾ ಹಿಮಾಯತ ಅವರನ್ನು ಬಂದಿಸಿದ್ದಾರೆ.

ಆರೋಪಿತರಿಂದ ಕಳ್ಳತನ ಮಾಡಿದ ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here