ಜೇವರ್ಗಿ: 42 ವಿಕಲಚೇತನರಿಗೆ ಮೋಟಾರೀಕೃತ ಟ್ರೈಸೈಕಲ್‌ಗಳ ವಿತರಣೆ

0
22

ಜೇವರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್‌ ಧರ್ಮಸಿಂಗ್‌ ಅವರು ಗುರುವಾರ ಜೇವರ್ಗಿಯ ತಾಲೂಕು ಕ್ರೀಂಡಾಗಣದಲ್ಲಿ ಜರುಗಿದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜೇವರ್ಗಿಯಲ್ಲಿ 42 ವಿಕಲ ಚೇತನರಿಗೆ ಮೋಟಾರೀಕೃತ ಟ್ರೈಸೈಕಲ್‌ಗಳ ವಿತರಣೆ ಮಾಡಿ ಶುಭ ಕೋರಿದರು.

ಇದಲ್ಲದೆ ಸಿಎಂ ಪದಕ ವಿಜೇತರಾಗಿರುವ ಅಗ್ನಶಾಮಕ ಠಾಣೆ ಪೇದೆ ಸುಭಾಸ ಅವರಿಗೆ ಸಮಾರಂಭದಲ್ಲಿ ಸತ್ಕರಿಸಲಾಯ್ತು. ಇದಲ್ಲದೆ ವಿದ್ಯುತ್‌ ಅಪಘಾತದಲ್ಲಿ ಸಾವನ್ನಪ್ಪಿರುವ ರೈತ ರೇಣುಕಾ ಕುಟುಂಬಕ್ಕೆ 5 ಲಕ್ಷ ರು ಪರಿಹಾರದ ಚೆಕ್‌ ಶಾಸಕರು ವಿತರಿಸಿದರು.

Contact Your\'s Advertisement; 9902492681

ಇದಲ್ಲದೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿ ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಡಾ. ಅಜಯ್‌ ಸಿಂಗ್‌ ಸತ್ಕರಿಸಿದರು.

ತಹಶೀಲ್ದಾರ್‌ ಮಲ್ಲಣ್ಣ ಯಲಗೋಡು, ತಾಪಂ ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ್‌, ತಾಪಂ ಮುಖ್ಯಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಸಕರು ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ಸಿಬ್ಬಂದಿಗಳನ್ನು ಗೌರವಿಸಿ ಶುಭ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here