ಜಿಂದಾಲ್ ಗೆ ನೀಡರುವ ಭೂಮಿ ಮರಳಿ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

0
40

ಕಲಬುರಗಿ: ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿರುವ ಕನ್ನಡ ದ್ರೋಹಿ ಜಿಂದಾಲ್ ಕೈಗಾರಿಕೆ ನೀಡಿರುವ 3677 ಎಕರೆ ಭೂಮಿ ಮರಳಿ ಪಡೆಯುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ರಾಜ್ಯದ ನೆಲ,ಜಲ,ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಸ್ಥಾಪನೆಯಾದ ಜಿಂದಾಲ್ ಉಕ್ಕು ಕಾರ್ಖಾನೆ ಭೂಮಿ ನೀಡಿದ ಸ್ಥಳಿಯರು ಸೇರಿದಂತೆ ರಾಜ್ಯದ ಜನತೆಗೆ ಉದ್ಯೋಗ ನೀಡದೆ ವಂಚಿಸಿ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದೆ.ಇದಕ್ಕೆ ಸರಕಾರ ಹಿಂಬಾಗಿಲಿನಿಂದ ಸಹಕಾರ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಬಡ ರೈತರ ಫಲವತ್ತಾದ ಜಮೀನನ್ನು ತಮ್ಮ ಹಣ ಬಲ, ಅಧಿಕಾರ ಬಲದಿಂದ ಪಡೆದುಕೊಂಡ ಜಿಂದಾಲ್ ಕೈಗಾರಿಕೆ ಜಮೀನು ನೀಡಿರುವ ಸ್ಥಳೀಯರನ್ನು ಮೂರನೆಯ ದರ್ಜೆ ಪ್ರಜೆಗಳಂತೆ ನೋಡುತ್ತಿದ್ದಾರೆ. ಸ್ಥಳೀಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಈ ಕೈಗಾರಿಕೆಯ ವಿರುದ್ಧ ಸ್ಥಳಿಯರು ಹಲವಾರು ದೂರುಗಳನ್ನು ನೀಡಿದರೂ ಜಿಲ್ಲಾಡಳಿತ ಪರಿಗಣಿಸದೆ ಇರುವುದು ರ್ದುದೈವ ಎಂದು ದುರಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿರುವ ಈ ಕೈಗಾರಿಕೆಗೆ ಸರಕಾರ ಆ ಭಾಗದ ಬಡ ರೈತರ ಫಲವತ್ತಾದ ಭೂಮಿ ನೀಡ ಬಾರದು ಎಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ. ನಿನ್ನೆ ಸಂಪುಟ ಸಭೆಯಲ್ಲಿ ಭೂಮಿ ನೀಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಮರಳಿ ಪಡೆಯುವಂತೆಯೂ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ವಿ. ಮಠಪತಿ, ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ಸಂಘಟನಾ ಕಾರ್ಯದರ್ಶಿ ಚಂದ್ರು ಸನಗುಂದ, ಉತ್ತರ ವಲಯ ಅಧ್ಯಕ್ಷ ಈರಣ್ಣ ಪಾಟೀಲ, ಯುವ ಘಟಕ ಅಧ್ಯಕ್ಷ ಶ್ರೀಶೈಲ ಕನ್ನಡಗಿ, ಸೇಡಂ ತಾಲೂಕಾ ಅಧ್ಯಕ್ಷ ಭೀಮಾಶಂಕರ ಕೊರವಿ, ಧರ್ಮಾ ಶಹಾಪೂರಕರ, ಮಂಜು ಕಡಗಂಚಿ, ಜಯಾನಂದ ಬಿರಾದಾರ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here