ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ ರೈತ ಸೇನೆ ಹಾಗೂ ರೈತ ಸಂಘ ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಚಿಂಚೋಳಿ ತಾಲೂಕಿನಲ್ಲಿ ಇನ್ನೂ ಅನೇಕ ಸಿಮೆಂಟ್ ಫ್ಯಾಕ್ಟರಿಗಳಿದ್ದು ಆ ಫ್ಯಾಕ್ಟರಿಗಳ ಮಾಲಿನ್ಯ ಆಗುತ್ತಿಲ್ವೇ,? ಕಮರ್ಷಿಯಲ್ ಕಾರ್ಖಾನೆಗಳು ನಡಿತಾ ಇದ್ದರು ಯಾವುದೇ ಕಂಪನಿಗೆ ತೊಂದರೆಯಾಗಿಲ್ಲ. ಈ ರೈತನ ಕಂಪನಿಗೆ ಮಾತ್ರ ಮಾಲಿನ್ಯ ಮತ್ತೇನು ಇನ್ನೊಂದು ಹೇಳಿ ಮುಚ್ಚಲಾಗಿದೆ ಇದು ಎಂತ ದುರ್ಭಾಗ್ಯ.
ಕಾರ್ಖಾನೆ ಪ್ರಾರಂಭಕ್ಕೆ ಸರಕಾರ ಅನುಮತಿ ನೀಡಿದ್ದು, ಇದನ್ನು ರೈತರು ಸಾವಿರಾರು ಎಕ್ರೆ ಕಬ್ಬು ಬೆಳೆದಿದು ಕಾರ್ಖಾನೆ ಬಂದಾಯ್ತು. ಡಿಸಿ ಬೇರೆ ಬೇರೆ ಕಾರ್ಖಾನೆಯವರನ್ನು ಸೂಚಿಸಿದರು ಅವರು ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
ಸರಕಾರ ಮಧ್ಯಸ್ಥಿಕೆ ವಹಿಸಿ ಬಂದ್ ಆಗಿರುವ ಸಕ್ಕರೆ ಕಾರ್ಖಾನೆ ಆರಂಭಿಸಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ಮನವಿ ಮಾಡಿದ್ದಾರೆ.