ಕವಿಮಾರ್ಗ: ಡಾ. ಜಯಶ್ರೀ ವೀರಣ್ಣ ದಂಡೆ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ನಾಳೆ

0
203

ಕಲಬುರಗಿ: ಬಸವ ಸಮಿತಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಮಾತೋಶ್ರೀ ಮಹಾದೇವಿಯಮ್ಮ ಲಿಂ. ಗುರುಪಾದಪ್ಪ ಮಾಲಿ ಪಾಟೀಲ ಸ್ಮರಣಾರ್ಥ ಅರಿವಿನ ಮನೆ ದತ್ತಿ ಅನುಭಾವ ಹಾಗೂ ಕವಿಮಾರ್ಗ: ಡಾ. ಜಯಶ್ರೀ ವೀರಣ್ಣ ದಂಡೆ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ 20 ರಂದು ಸಂಜೆ 6 ಗಂಟೆಗೆ ಜಯನಗರದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಹಾಗೂ ದತ್ತಿ ದಾಸೋಹಿ ಡಾ. ಕಲ್ಯಾಣರಾವ ಜಿ. ಪಾಟೀಲ ತಿಳಿಸಿದ್ದಾರೆ.

ಮಹಾಮಹಿಮ ಸಂಗನ ಬಸವಣ್ಣನವರ ಸಾನ್ನಿಧ್ಯದಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಎಸ್.ಐ. ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಈಶ್ವರಯ್ಯ ಮಠ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ಭೂ ಸ್ವಾಧೀನ ಇಲಾಖೆಯ (ಕೆಐಎಡಿಬಿ) ಅಧಿಕಾರಿ ಡಾ. ಬಿ.‌ಶರಣಪ್ಪ ಸತ್ಯಂಪೇಟೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಯರಗಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ, ಬೋನಾಳ ಅವರು ” ಬಸವಣ್ಣನವರು ಹಾಗೂ ಜಾಗತಿಕ ದಾರ್ಶನಿಕರು” ವಿಷಯ ಕುರಿತು ಅನುಭಾವ ನಿಉಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here