ಬೈಕ್ ಅಪಘಾತ: ಸ್ಥಳದಲ್ಲೇ ಓರ್ವ ಸಾವು

0
300

ಕಲಬುರಗಿ: ಜೇವರ್ಗಿ ರಸ್ತೆಯ ಸರಡಗಿ (ಬಿ) ಗ್ರಾಮದ ಖಣಿ ಹತ್ತಿರ ಅಣ್ಣನ ನೋಡಲೆಂದು ಹೊರಟಿದ್ದ ತಮ್ಮ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಇಂದು ನಡೆದಿದೆ.

ನಾಗರಾಜ ಗಣಪತಿ ಮಂದಡಿ (21) ಎಂದು ಗುರುತಿಸಲಾಗಿದೆ. ಮೃತ ನಾಗರಾಜ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ದಾಸರವಾಡಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ನಾಗರಾಜ ಶಹಾಪುರ ತಾಲ್ಲೂಕಿನ ಮಾಡಬೂಳ ಗ್ರಾಮದಲ್ಲಿರುವ ತನ್ನ ಅಣ್ಣ ಯಲ್ಲಪ್ಪಾ ಅವರನ್ನು ನೋಡಲೆಂದು ಬೈಕ್ ಮೇಲೆ ಹೋಗುತ್ತಿದ್ದಾಗ ಜೇವರ್ಗಿ ಹತ್ತಿರದ ಸರಡಗಿ (ಬಿ) ಗ್ರಾಮದ ಖಣಿ ಹತ್ತಿರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕಲಬುರಗಿ ಸಂಚಾರಿ ಪೊಲೀಸ್ ಠಾಣೆಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here