ಜೇವರ್ಗಿ: ಶಿವಲಿಂಗ ಮಯೂರ ಕೊಲೆಯನ್ನು ಖಂಡಿಸಿ ಪ್ರತಿಭಟನೆ

0
65

ಕಲಬುರಗಿ: ಜೇವರ್ಗಿಯ ದಲಿತ ಮುಖಂಡ ಹಾಗೂ ಗುತ್ತಿಗೆದಾರ ಶಿವಲಿಂಗಪ್ಪ ಮಯೂರ ಅವರ ಕೊಲೆಯನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ತಾಲೂಕ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವ್ರತ್ತದಿಂದ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಲಾಯಿತು. ಮ್ರತ ಶಿವಲಿಂಗ ಮಯೂರ ಅವರಿಗೆ ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮ್ರತರ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಆರೋಪಿಗಳಿಗೆ ನೀಡಲಾಗಿರುವ ಸಶಸ್ರ್ತ ಪರವಾನಿಗೆಯನ್ನು ರದ್ದು ಮಾಡಬೇಕು. ಮ್ರತ ಶಿವಲಿಂಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ತಹಸೀಲ್ದಾರ ಅವರ ಮೂಲಕ ಮುಖ್ಶಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ವಲಯ ಉಸ್ತುವಾರಿ ಎಲ್.ಬಿ. ಬೋಸ್ಲೇˌ ಜೈಭೀಮ್ ಶಿಂಧೆˌ ಡಾ.ಅನೀಲ್ ಟೇಂಗಳಿˌ ಮಹಾಂತೇಶ ಅವರಾದˌ ಯಮನೇಶ ಅಂಕಲಗಿˌ ತಾಲೂಕಾಧ್ಶಕ್ಷ ಪ್ರಭಾಕರ್ ಸಾಗರˌ ಪರಮಾನಂದ ಯಲಗೋಡˌ ಭೀಮರಾಯ ನೆಲೋಗಿˌ ನಿಕೀಲ ಹುಲ್ಲೂರˌ ಮಲ್ಲಿಕಾರ್ಜುನ ನೇದಲಗಿˌ ವಿಶ್ವರಾಧ್ಶˌ ಸಾಗರ ನೆಲೋಗಿˌ ಸುಭಾಷ ಬಂಡಾರಿˌ ಬಸವರಾಜ ಕರದಾಳˌ ಶಿವಪುತ್ರ ಭಾವಿಕಟ್ಟಿˌ ಭಾಜಿರಾಯ ಗೊಲ್ಲಾಳಪ್ಪˌ ದೇವಿಂದ್ರ ಶಿವರಾಯˌ ಖಾಜಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here