ಅನರ್ಹ ಶಾಸಕರ ಗೆಲುವಿನ ಹೊಣೆ ನಮ್ಮ ಮೇಲಿದೆ: ಸಿಎಂ ಯಡಿಯೂರಪ್ಪ

0
64

ಬೆಂಗಳೂರು: ನಿಮಗೆ ನೀಡಿದ ಭರವಸೆ ಹುಸಿಗೊಳಿಸಿಸಲ್ಲ, ವಿಶ್ವಾಸ ದ್ರೋಹ ಮಾಡಲ್ಲ ಎಂದು ಬಿಜೆಪಿ ಸೇರಿದ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಿಎಂ, ದೇಶದಲ್ಲಿ ಎಲ್ಲೂ 17 ಶಾಸಕರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ. ಈ ಅಭ್ಯರ್ಥಿಗಳ ಗೆಲುವಿನ ಹೊಣೆ ನಮ್ಮ ಮೇಲಿದೆ. ತನು, ಮನ, ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಬೇಕು.

Contact Your\'s Advertisement; 9902492681

ಡಿ. 5ರಂದು ಫಲಿತಾಂಶ ಬರಲಿದೆ. ನಂತರ ಈ ಎಲ್ಲಾ ಶಾಸಕರಿಗೆ ದೊಡ್ಡ ಕ್ಷೇತ್ರದಲ್ಲಿ ಸನ್ಮಾನ ಮಾಡುತ್ತೇವೆ ಎಂದಿದ್ದಾರೆ.ಉಮೇಶ್ ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಮೇಶ್ ಜಿಗಜಿಣಗಿಗೂ ಉಸ್ತುವಾರಿ ನೀಡಿದ್ದೇವೆ. 22 ಸಂಸದರು, ಶಾಸಕರು, ಕಾರ್ಯಕರ್ತರು ನಿಮ್ಮ ಜೊತೆಗೆ ಇದ್ದೇವೆ. ಕೇಂದ್ರದ ನಾಯಕತ್ವ ನಿಮ್ಮ ಜೊತೆ ಇದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ನಾನು ತುರ್ತಾಗಿ ತುಮಕೂರಿಗೆ ಹೋಗಬೇಕಿದೆ. ಹೀಗಾಗಿ ನಾನು ಇರಲೇಬೇಕು ಎಂದು ಬಂದಿದ್ದೇನೆ. ಎಲ್ಲರೂ ಜವಾಬ್ದಾರಿಯಿಂದ ನಮ್ಮ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here