ಕ್ಷುಲ್ಲಕ ಕಾರಣ ವ್ಯಕ್ತಿ ಓರ್ವನ ಸಾವು: ನಾಲ್ವರ ಬಂಧನ

0
95

ಕಲಬುರಗಿ: ಇಲ್ಲಿನ ಮಹಾಗಾಂವ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಐವರ ಮದ್ಯೆ ಕ್ಷುಲ್ಲಕ ಕಾರಣ ಜಗಳ ಸಂಭವಿಸಿದ ಪರಿಣಾಮ ವ್ಯಕ್ತಿ ಓರ್ವನಿಗೆ ಕಲ್ಲಿನಿಂದ ಮಾರಣಾಂತುಕ ಹಲ್ಲೆ ನಡೆಸಿದ ಕಾರಣ ಚಿಕಿತ್ಸೆ ಫಲಿಸದ ಹಿನ್ನೆಲೆ ಸಾವನಪ್ಪಿರುವ ಘಟನೆ ನಡೆದಿದೆ.

ಮಹಾಗಾಂವಗ್ರಾಮದ ವಿರಭದ್ರ ಬಸವರಾಜ ಪಾರಾ ಎಂಬ ಘಟನೆಯಲ್ಲಿ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ದುರ್ದೈವಿ. 14 ಜೂನ್ ರಂದು ಮಧ್ಯೆ ರಾತ್ರಿ ಕುಡಿದು ಆಮಲಿನಲ್ಲಿ ಐವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಸಂಭವಿಸಿದ ನಾಲ್ವರು ಆರೋಪಿಗಳು ಸೇರಿ ವಿರಭದ್ರ ಅವರ ಮೇಲೆ ಮಾರಣಾಂತುಕ ಹಲ್ಲೆ ನಡೆಸಿದಿತ್ತು.

Contact Your\'s Advertisement; 9902492681

ಹಲ್ಲೆಯಲ್ಲಿ ಗಾಯಗೊಂಡ ವಿರಭದ್ರ ಅವರಿಗೆ ಸ್ಥಳೀಯ ಆಸ್ಪತ್ರೆ ಸೇರಿದಂತೆ ನೆರೆ ರಾಜ್ಯ ಹೈದಾರಾಬಾದ್, ಸೊಲ್ಲಾಪುರಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಯಲ್ಲಿ ನಿನ್ನೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆ ತಮ್ಮ ಸ್ವ ಗ್ರಾಮದಲ್ಲಿ ಇಂದು ಸಂಜೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಆರೋಪಿಗಳ ಬಂಧನ: ವಾಜೀದ್, ಮಹಾದೇವ್, ನಾಗೇಶ್ ಹಾಗೂ ಗೌರಿಶಂಕರ್ ಅವರನ್ನು ಮಹಾಗಾಂವ ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here