ಕನಕದಾಸರ ತತ್ವ ಆದರ್ಶಗಳು ನಾವೆಲ್ಲರೂ ಪಾಲಿಸಬೇಕು: ಶಾಸಕ ಬಸವರಾಜ ಮತ್ತಿಮಡು

0
102

ಕಲಬುರಗಿ: ಭಕ್ತ ಕನಕದಾಸರು ತಮ್ಮ ಅನೇಕ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ ಹಾಗಾಗಿ ಕನಕದಾಸರ ತತ್ವ ಆದರ್ಶಗಳನ್ನು ಇಂದು ನಾವೆಲ್ಲರೂ ಪಾಲಿಸಬೇಕು. ಹಾಗೆಯೇ ಭಕ್ತಿ ಮಾರ್ಗದಲ್ಲಿ ಸಮಾಜದ ಕೊಳಕುಗಳನ್ನು ಕಳೆದ ಕನಕದಾಸರ ಆದರ್ಶವನ್ನು ಇಂದು ನಾವೆಲ್ಲರೂ ಪಾಲಿಸಬೇಕು ಎಂದು ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಇಂದು ನಗರದ ಎಸ್‌ ಎಮ್ ಪಂಡಿತ ರಂಗಮಂದಿರದಲ್ಲಿ ಭಕ್ತ ಕನಕದಾಸರ 532ನೇ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಭಕ್ತಿಯ ಮೂಲಕ ಹೃದಯ ಪರಿವರ್ತನೆಯ ಮಾರ್ಗ ಹಿಡಿದ ಭಕ್ತ ಕನಕದಾಸರ ಇಂದಿನ ಜಗತ್ತಿನಲ್ಲಿ ಜಾತಿ, ಮತ, ಧರ್ಮ, ಭ್ರಷ್ಟಾಚಾರ, ಕಂದಾಚಾರ, ಪ್ರಕೃತಿ ವಿಕೋಪಗಳಿಂದ ತುಂಬಿ ತುಳುಕುತ್ತಿದೆ. ಇವುಗಳಿಗೆ ಪರಿಹಾರ ಎಂದರೆ ದಾಸಶ್ರೇಷ್ಠ ಭಕ್ತ ಕನಕದಾಸರ ದಾರ್ಶನಿಕ  ತತ್ವಗಳನ್ನು ನಾವುಗಳು ಪಾಲಿಸಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ನಮ್ಮಲ್ಲಿ ಬೇರೂರಿರುವ ಕುಲದ ಬೇರುಗಳನ್ನು ಅಂದಿನ ಕಾಲದಲ್ಲಿಯೇ ಕಿತ್ತೆಗೆದು ಹಾಕಿದವರು ಕನಕದಾಸರು.  ಸಮಾಜದಲ್ಲಿ ಸಮಾನತೆಯನ್ನು ಮೂಡಿಸುವ ದಾಸ ಶ್ರೇಷ್ಠ ಕಾರ್ಯವಾಗಿತ್ತು. ಕನಕದಾಸರ ಭಕ್ತಿಗೆ ಮೆಚ್ಚಿದ ಕೃಷ್ಣ ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಿರುಗಿದ್ದು ಇತಿಹಾಸ ಹಾಗೂ ಜನಮಾನಸದಲ್ಲಿ ದಾಖಲಾಗಿದೆ. ಭಕ್ತಿಯ ಮೂಲಕ ದೇವರನ್ನು ತನ್ನ ಕಡೆಗೆ ತಿರುಗಿಸಿಕೊಂಡು ಕನಕದಾಸರು ಭಗವಂತನಿಗೆ ಸಮಾನರಾಗಿದ್ದಾರೆ.  ಇಂದಿನ ಯುವಕರು ಗುರುಗಳಿಗೆ ನಮ್ಮ ತಂದೆ ತಾಯಿಗಳಿಗೆ ಗೌರವಿಸುವ ಮತ್ತು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಅಂದಾಗ  ಮಾತ್ರ ಈ ಸಮಾಜ ಒಳ್ಳೆಯ ರೀತಿಯಲ್ಲಿ ನಿರ್ಣಾಮ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದರು.ಮಹಾತ್ಮರ ಸ್ಮರಣೆ  ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು. ಆ ಮೂಲಕ ಈ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತಿಂತಣಿ ಬ್ರಿಡ್ಜ್ ಕಾಗಿನೆಲೆ ಕನಕಗುರು ಪೀಠದ ಪೂಜ್ಯ ಶ್ರೀ ಲಿಂಗಬೀರ ದೇವರು ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ್, ಎಸ್.ಪಿ. ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಪಿ.ರಾಜಾ, ಡಿಸಿಪಿ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಪ್ರೊಬೇಷನರ್ ಐ.ಎ.ಎಸ್ ಅಧಿಕಾರಿ ಡಾ.ಬಿ.ಗೋಪಾಲಕೃಣ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು ನೂರಾರು ಸಂಖ್ಯೆಯಲ್ಲಿ ಸೇರಿದ ಸಮುದಾಯ ಬಾಂಧವರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here