ವ್ಯಕ್ತಿ ಕೊಲೆಗೈದು ಗೋಣಿ ಚೀಲದಲ್ಲಿ ಕಟ್ಟಿ ಭೀಮಾ ನದಿಯಲ್ಲಿ ಎಸೆದ ಹಂತಕರು

0
112

ಕಲಬುರಗಿ: ಓರ್ವ ವ್ಯಕ್ತಿಯನ್ನು ಕೊಲೆಗೈದು ಗೋಣಿ ಚೀಲದಲ್ಲಿ ಶವವನ್ನು ಹಾಕಿ ಭೀಮಾ ನದಿಯಲ್ಲಿ ಎಸೆದ ಘಟನೆ ಜಿಲ್ಲೆಯ ಅಫಜಲಪೂರ್ ತಾಲ್ಲೂಕಿನ ಶಿವೂರ್ ಬಳಿ ವರದಿಯಾಗಿದೆ. ಮೃತನ ಹೆಸರು ಮತ್ತು ಗುರುತು ತಕ್ಷಣಕ್ಕೆ ಪತ್ತೆ ಆಗಿಲ್ಲ.

ಕೊಲೆಯಾದ ವ್ಯಕ್ತಿ ಅಂದಾಜು ೩೫ ವರ್ಷ ವಯಸ್ಸು ಇದ್ದು, ಸಾಧಾರಣ ಮೈಕಟ್ಟು, ಕಪ್ಪು ಬಣ್ಣದ ಬಟ್ಟೆ ಇದೆ. ಕೊಲೆಯಾದ ವ್ಯಕ್ತಿಯ ಕೈ ಮೇಲೆ ಹಣಮಂತ್ ಹಾಗೂ ನಾಗರಹಾವಿನ ಹಚ್ಚಿಕೆ ಇದೆ.

Contact Your\'s Advertisement; 9902492681

ಯಾವುದೇ ದುರುದ್ದೇಶದಿಂದ ಕೊಲೆ ಮಾಡಿ ಹಂತಕರು ಭೀಮಾ ನದಿಯಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಅಫಜಲಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here