ಎಸ್.ಎಸ್. ಮರಗೋಳ್ ಪಿಯು ಕಾಲೇಜಿನಲ್ಲಿ ನಾಳೆ ಮಕ್ಕಳ ದಿನಾಚರಣೆ

0
144

ಶಹಾಬಾದ್: ಹೈಕ ಶಿಕ್ಷಣ ಸಂಸ್ಥೆಯ ಎಸ್.ಎಸ್. ಮರಗೋಳ್ ಪಿಯು ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ೧೧ ಗಂಟೆಗೆ ಮಕ್ಕಳ ದಿನಾಚರಣೆ-೨೦೧೯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಶಿವಲಾಲ ಎಸ್. ಹತ್ತಿ ಹಾಗೂ ಸಾಂಸ್ಕೃತಿಕ ಸಲಹೆಗಾರ ಬಸವರಾಜ ಮದ್ರಿಕಿ ತಿಳಿಸಿದ್ದಾರೆ.

ಕಾಲೇಜಿನ ಅಡಿಟೋರಿಯಂ ಹಾಲ್ ನಲ್ಲಿ ಜರುಗಲಿರುವ ಈ ಕಾರ್ಯಕ್ರಮಕ್ಕೆ “ಶರಣ ಮಾರ್ಗ” ಪತ್ರಿಕೆ ಸಂಪಾದಕ ಶಿವರಂಜನ್ ಸತ್ಯಂಪೇಟೆ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಎಸ್.ಎಸ್.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಅನಿಲಕುಮಾರ ಆರ್. ಕೊಪ್ಪರಕರ್ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಉಪನ್ಯಾಸಕರಾದ ಡಾ. ಕೆ. ವೆಂಕಟರಾಜಪ್ಪ, ಸುಮಂಗಲಾ ಪಾಟೀಲ, ಬಸವರಾಜ ಮದ್ರಿಕಿ ಅತಿಥಿಗಳಾಗಿ ಆಗಮಿಸಲಿದ್ದು, ಪ್ರಾಚಾರ್ಯ ಡಾ. ಶಿವಲಾಲ ಎಸ್. ಹತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here