1 ರಂದು ‘ಕಾಮದ ಹೆಣ್ಣು, ಕಟುಕನ ಕಣ್ಣು’ ನಾಟಕ ಪ್ರದರ್ಶನ

2
323

ಕಲಬುರಗಿ: ಚಿಂಚೋಳಿ ತಾಲೂಕಿನ ರಾಯಕೋಡ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರ ಮಹೋತ್ಸವದ ಅಂಗವಾಗಿ ಮೂರು ದಿನಗಳ ನಾಟಕ ಪ್ರದರ್ಶನ ಕಾರ್ಯಕ್ರಮ ಯೋಜಿಸಲಾಗಿದೆ ಎಂದು ಶ್ರೀ ಬಸವೇಶ್ವರ ನವ ತರುಣ ನಾಟ್ಯ ಸಂಘ ಸಮಿತಿ ತಿಳಿಸಿದ್ದೆ.

ಈ ನಾಟಕ ಮೇ.1 ರಿಂದ 3 ವರಗೆ ಗ್ರಾಮದಲ್ಲಿ ಆಯೋಜಿಸಲಾಗಿದ್ದು, ಗ್ರಾಮದ ನಿವಾಸಿಗಳೆ ನಾಟಕದ ಪ್ರಮುಖ ಪಾತ್ರಧಾರಿಗಳಾಗಿ ನಟಿಸಲಿದ್ದಾರೆ. ಈಗಾಗಲೆ ನಾಟಕ ಪ್ರದರ್ಶನದ ಎಲ್ಲಾ ರೀತಿಯ ತಯಾರಿ ಅಂತಿಮ ಹಂತದಲ್ಲಿ ಇದೆ ಎಂದು ಸಂಘದ ಸದಸ್ಯ ಆಸೀಫ್ ಅಲಿ ಇ-ಮೀಡಿಯಾ ಲೈನ್ ಗೆ ಮಾಹಿತಿ ನೀಡಿ ಮಾತನಾಡಿದ್ದಾರೆ.

Contact Your\'s Advertisement; 9902492681

ಕಾಮದ ಹೆಣ್ಣು, ಕಟುಕನ ಕಣ್ಣು’ ನಾಟಕ, ಸಮಾಜ ಹೆಣ್ಣಿಗೆ ಕಾಣುವ ದೃಷ್ಠಿ ಕೊನಗಳು, ಹೆಣ್ಣಿಗೆ ಯಾವ ರೀತಿಯಾಗಿ ಬಳಸಿಕೊಳುವುದಕ್ಕೆ ಸಮಾಜ ಮುಂದಾಗುತ್ತಿದೆ ಎಂಬುದನ್ನು ಪಾತ್ರಧಾರಿಗಳು ತಮ್ಮ ನಾಟಕದ ಅಭಿನಯದಲ್ಲಿ ತೋರಿಸಲಿದ್ದಾರೆಂದು ಅವರು ತಿಳಿಸಿದ್ದರು.

ನಾಟಕದ ಕಥಾ ನಿರ್ದೇಶಕ ವಿರೋಪಾಕ್ಷ ಲಿಂಗಸೂರು ಅವರಾಗಿದ್ದು ಇವರ ನೇತೃತ್ವದಲ್ಲೇ ಪಾತ್ರಧಾರಿಗಳು ನಾಟಕದ ಅಭ್ಯಸ ನಡೆಸಿದ್ದಾರೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದರು.

ನಾಟಕ ಉದ್ಘಾಟನೆ ಹಾಗೂ ವಿಕ್ಷೀಸಲು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್, ಮುಖ್ಯ ಅತಿಥಿಗಳಾಗಿ ಆಮಿಸಲಿದ್ದು, ಗ್ರಾಮದ ಪ್ರಮುಖ ಗಣ್ಯರು ಮತ್ತು ಎಲ್ಲಾ ಗ್ರಾಮಸ್ಥರು ಭಾಗವಹಿಸಲಿದ್ದಾರೆಂದು ತಿಳಿಸಿ, ನಾಟಕದ ಪ್ರದರ್ಶದ ಕುರಿತು ಈಗಾಗಲೆ ಸುತಮುತ್ತಲಿನ ಗ್ರಾಮ ಹಾಗೂ ಜಿಲ್ಲಾದ್ಯಾಂತ ಪ್ರಕಟನೆಗಳು ಹೊರಡಿಸಿ ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾಗಿದೆಂದು ತಿಳಿಸಿದ್ದರು.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here