ಜೇವರ್ಗಿ: ತಾಪಂ ಕಾಂಗ್ರೆಸ್ ಸದಸ್ಶನನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

0
2001

ಜೇವರ್ಗಿ: ದಲಿತರಿಗೆ ಮನೆಹೊಕ್ಕು ಹೊಡೆಯುತ್ತೇವೆಂದು ಭಾಷಣ ಮಾಡಿದ ಕುರಳಗೇರ ತಾಲೂಕ ಪಂಚಾಯತ ಸದಸ್ಶ ಮಲ್ಲಣಗೌಡ ಪಾಟೀಲ್ ಅವರನ್ನು ಬಂಧಿಸಬೇಕು. ದಲಿತ ಯುವಕನನ್ನು ಪ್ರೀತಿಸುತಿದ್ದ ಕುರಳಗೇರ ಗ್ರಾಮದ ಗುರುಬಾಯಿ ಎಂಬ ವಿದ್ಶಾರ್ಥಿನಿಯನ್ನು ಮರ್ಯಾದೆ ಹತ್ಶೆ ಹೆಸರಿನಲ್ಲಿ ಕೊಲೆ ಮಾಡಿದ ಕುಟುಂಬದವರಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಹಸೀಲ ಹಳೆ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಿದ ದಲಿತ ಸಮನ್ವಯ ಸಮಿತಿ ಮುಖಂಡರು ತಹಸೀಲ್ದಾರ ಸಿದ್ದರಾಯ ಬೋಸಗಿ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಮುಖಂಡರುˌ ಕುರಳಗೇರಿ ಗ್ರಾಮದಲ್ಲಿ ಯುವತಿಗೆ ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಜುಮ್ಮಣ್ಣನನ್ನು ಮತ್ತು ಇತರರನ್ನು ವಿನ: ಕಾರಣ ಬಂಧಿಸಲಾಗಿದೆ. ಯುವತಿಯ ಕುಟುಂಬದವರೆ ಮರ್ಯಾದೆ ಹತ್ಶೆ ಹೆಸರಿನಲ್ಲಿ ಕೊಲೆ ಮಾಡಲಾಗಿದೆ. ಯುವತಿಯ ಮರಣೋತ್ತರ ಪರೀಕ್ಷೆಯಲ್ಲಿ ಪ್ರಭಾವಿಗಳು ಒತ್ತಡ ಹಾಕಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಯುವತಿಯ ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬೇಕು. ದಲಿತರಿಗೆ ಅವಮಾನಿಸುವ ರೀತಿಯಲ್ಲಿ ಮಾತನಾಡಿದ ತಾಪಂ ಸದಸ್ಶ ಮಲ್ಲಣಗೌಡ ಪಾಟೀಲ ಅವರ ಮೇಲೆ ದಲಿತ ದೌರ್ಜನ್ಶ ಪ್ರಕರಣದಡಿಯಲ್ಲಿ ಕೇಸ್ ದಾಖಲಿಸಬೇಕು. ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮ್ರತ ಗುರುಬಾಯಿ ಆತ್ಮಕ್ಕೆ ಶಾಂತಿ ಕೋರಿ ಮೌನವ್ರತ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಶ ಚಂದ್ರಶೇಖರ ಹರನಾಳˌ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ದವಲಪ್ಪ ಮದನˌ ಶ್ರೀಮಂತ ಧನಕರˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಸಿದ್ದಪ್ಪ ಆಲೂರˌ ಸಿದ್ರಾಮ ಕಟ್ಟಿˌ ಸಂಗಣ್ಣ ಗುಡೂರˌ ದೇವೇಂದ್ರ ವರ್ಮಾˌ ಸಂಗು ಕಟ್ಟಿಸಂಗಾವಿˌ ಗುರಣ್ಣ ಐನಾಪುರˌ ಶ್ರೀಕುಮಾರ ಕಟ್ಟಿಮನಿˌ ರಾಜು ಹಾಲಗಡ್ಲಾˌ ಬಸವರಾಜ ಹೆಗಡೆˌ ಬಸವರಾಜ ಕೋಳಕೂರˌ ಮಹೇಶ ಕೋಕಿಲೆˌ ಮಹಾದೇವ ಕೋಳಕೂರˌ ಸಿದ್ದು ಶರ್ಮಾˌ ಭೀಮರಾಯ ಬಳಬಟ್ಟಿˌ ವಿಶ್ವರಾಧ್ಶ ಮಾಯಾˌ ಭಾಗಣ್ಣ ಸಿದ್ನಾಳˌ ಭಾಗಣ್ಣ ಕೋಳಕೂರ ಸೇರಿದಂತೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here