ವಿದ್ಯಾರ್ಥಿಗಳಿಗೆ ಎಚ್.ಐ.ವಿ ಸೋಂಕಿನ ಬಗ್ಗೆ ಅರಿವು ಅಗತ್ಯ: ಡಾ.ಪಸ್ತಾಪುರ

0
45

ಕಲಬುರಗಿ: ಪ್ರಸ್ತುತ ಸಮಾಜದಲ್ಲಿ ಸಾವಿರಾರು ಜನರು ಎಚ್.ಐ.ವಿ ವೈರಾಣುವಿನ ಸೋಂಕಿನಿಂದ ಬಳಲುತ್ತಿದ್ದಾರೆ. ಪರಿಣಾಮ ಎಡ್ಸ್ ರೋಗ ಹೆಚ್ಚಾಗುತ್ತಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಇಂತಹ ಮಹಾಮಾರಿ ರೋಗದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಎಚ್.ಐ.ವಿ ಏಡ್ಸ್ ಖ್ಯಾತ ವೈದ್ಯ ಡಾ.ಮುರಗೇಶ ಪಸ್ತಾಪುರ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಸ್ವಯಂ ಹಾಲನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಎಚ್.ಐ.ವಿ ಏಡ್ಸ್ ಖ್ಯಾತ ವೈದ್ಯ ಡಾ.ಮುರಗೇಶ ಪಸ್ತಾಪುರ ಮಾತನಾಡಿದರು. ಎಚ್.ಐ.ವಿ ಎಂದರೇ ಹ್ಯೂಮಾನ್ ಇಮ್ಯೂನೋ ಡೆಫಿಷಿಯನ್‌ಸ್ಸಿ ವೈರಸ್ ಆಗಿರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬೇಗನೆ ಹರಡುವ ಕಾಯಿಲೆಯಾಗಿದೆ. ಇದರಿಂದ ಸಂಭೋಗ ಕ್ರಿಯೆ ಮಾಡುವಾಗ ಕಾಂಡೊಮ್ ಬಳಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ಎಚ್.ಐ.ವಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್.ಐ.ವಿ ರಕ್ತ ಪರೀಕ್ಷೆ ಮತ್ತು ಉಚಿತ ಚಿಕಿತ್ಸೆ ಲಭ್ಯವಿದೆ. ಎಚ್.ಐ.ವಿ ಮತ್ತು ಎಡ್ಸ್ ಸೋಂಕಿತ ವ್ಯಕ್ತಿಯ ಜೊತೆ ಊಟ ಮಾಡಿದರೇ ಮತ್ತು ಅವರಿಗೆ ಮುಟ್ಟಿದರೆ ಸೋಂಕು ತಗಲುವದಿಲ್ಲ. ಇದರಿಂದ ಸೋಂಕಿತರನ್ನು ಪ್ರೀತಿಯಿಂದ ಕಾಣಬೇಕು ಎಂದು ಡಾ.ಮುರಗೇಶ ಪಸ್ತಾಪುರ ಸಲಹೆ ನೀಡಿದರು.

ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸುಮಾರು ವರ್ಷಗಳ ಹಿಂದೆ ಏಡ್ಸ್ ರೋಗದ ಲಕ್ಷಣ ಕಡಿಮೆ ಪ್ರಮಾಣದಲ್ಲಿತ್ತು. ಆದರೆ ಪ್ರಸ್ತುತ ವಿಶ್ವಾದ್ಯಂತ ಏಡ್ಸ್ ರೋಗದ ಲಕ್ಷಣ ದಿನನಿತ್ಯ ಹೆಚ್ಚುತ್ತಿದೆ. ಆದರೆ ಶುಚಿತ್ವ ಸಮಾಜಕ್ಕೆ ಏಡ್ಸ್ ನಿಯಂತ್ರಣ ಅಗತ್ಯವಾಗಿದೆ. ಎಂದು ಹೇಳಿದರು.
ವಿದ್ಯಾರ್ಥಿಗಳು ಈಗಿನಿಂದಲೇ ವಿವಿಧ ಮಹಾಮಾರಿ ರೋಗದ ಬಗ್ಗೆ ತಿಳಿದುಕೊಂಡರೆ ಎಷ್ಟೋ ಬಡ ಜೀವಗಳನ್ನು ಬದುಕಿಸಬಹುದಾಗಿದೆ. ಮತ್ತು ತಮ್ಮ ಬದುಕನ್ನು ಸುಂದರ ಮಾಡಿಕೊಳ್ಳಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಬಸವರಾಜ ದೇಶಮುಖ ಸಲಹೆ ನೀಡಿದರು.

ಶರಣಬಸವ ಕುಲಸಚಿವ ಅನೀಲಕುಮಾರ ಬಿಡವೆ ಮಾತನಾಡಿ, ಏಡ್ಸ್ ರೋಗ ಮಹಾಮಾರಿ ಡೆಂಜರೆಸ್ ರೋಗವಾಗಿದೆ. ಇದರಿಂದ ವಿದ್ಯಾರ್ಥಿಗಳು ಬದುಕಿನ ಬಗ್ಗೆ ನಿರ್ಲಕ್ಷ್ಯವಹಿಸದೇ ಎಚ್‌ಐವಿ ಸೋಂಕಿನ ಬಗ್ಗೆ ಅರಿತು ಕೊಳ್ಳುವುದು ಸೂಕ್ತವಾಗಿದೆ. ಎಂದರು.

ಶರಣಬಸವ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಮಾಕಾ, ಡೀನ್ ಬಸವರಾಜ ಮಠಪತಿ, ಶಿವುಕುಮಾರ ಜವುಳಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here