ಶರಣರ ವಚನಗಳು ಬದುಕಿಗೆ ದಾರಿದೀಪ: ಡಾ.ಶರ್ಮಾ

0
125

ಕಲಬುರಗಿ: ಸಮೃದ್ಧಿಯ ಸವಿನೆನಪಿನಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಬಸವ ಮಂಟಪದಲ್ಲಿ ಬುಧವಾರ ನಡೆದ ವಚನಾಧರಿತ ವಿವಿಧ ಸ್ಪರ್ಧೆಗಳನ್ನು ಅದ್ಧೂರಿಯಾಗಿ ಜರುಗಿತು.

ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಎರಡು ನೂರಕ್ಕೂ ಹೆಚ್ಚು ವಚನಗಳನ್ನು ಬಾಯಿಪಾಠವಾಗಿ ವಾಚಿಸಿ ಪ್ರೇಕ್ಷಕರ ಮನಗೆದ್ದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿ ಎಂ.ಜಿ.ಎಸ್.ವೈ. ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರರಾದ ಡಾ.ಸುರೇಶ ಶರ್ಮಾ, ಬಸವಾದಿ ಶರಣರು ತಮ್ಮ ವಚನಗಳಿಂದ ಸಮಾಜ ಬದಲಾವಣೆಯ ಕ್ರಾಂತಿ ಮಾಡಿ, ಕಾಯಕವೇ ಕೈಲಾಸ ಎಂದು ಸಾರಿದ್ದಾರೆ. ಶರಣರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬ ಮನುಷ್ಯ ಯಾವ ರೀತಿ ನಡೆದುಕೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಅತ್ಯಂತ ಸರಳವಾಗಿ ತಿಳಿಸಿದ್ದಾರೆ ಎಂದರು.

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಶರಣರ ವಚನಗಳನ್ನು ರಕ್ಷಣೆ ಮಾಡುವ ಜತೆಗೆ ಮುಂದಿನ ಪೀಳಿಗೆಗೆ ಅವುಗಳ ಮಹತ್ವ ತಿಳಿಸಬೇಕು. ಶರಣ ಸಂಸ್ಕೃತಿ, ಸಂಪ್ರದಾಯಗಳನ್ನು ಅಳವಡಿಸಿಕೊಂಡು ನಮ್ಮ ಜೀವನ ಪಾವನ ಮಾಡಿಕೊಳ್ಳಬೇಕೆಂದರು.

ಹಿರಿಯ ಶರಣ ಚಿಂತಕ ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ಬದುಕಿನ ಶಾಶ್ಚತ ಸತ್ಯದ ಹುಡುಕಾಟವೇ ಶರಣರ ಮುಖ್ಯ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾದದ್ದೆ ‘ಅರಿವೇ ಗುರು’ ಎಂಬ ತತ್ವ. ಇದೇ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಉತ್ತಮ ಹೆಜ್ಜೆ ವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶಟಗಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎಲ್.ಪಾಟೀಲ, ವಿಶ್ವನಾಥ ಮಂಗಲಗಿ, ಬಸವರಾಜ ಧೂಳಾಗುಂಡಿ, ದೀಪಿಕಾ ಬಿರಾದಾರ, ಶರಣರಾಜ್ ಛಪ್ಪರಬಂದಿ, ಶಿವಶರಣ ಕುಸನೂರ, ರವೀಂದ್ರಕುಮಾರ ಭಂಟನಳ್ಳಿ, ಎಸ್.ಎಂ. ಪಟ್ಟಣಕರ್, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಸತೀಶ ಸಜ್ಜನಶೆಟ್ಟಿ, ವಿಶಾಲಾಕ್ಷಿ ದೇಸಾಯಿ, ಪ್ರಸನ್ನ ವಾಂಜರಖೇಡೆ, ಡಾ.ನಾಗರಾಜ ಹೆಬ್ಬಾಳ, ಉದಯಕುಮಾರ ಸಾಲಿ, ಪ್ರಭುದೇವ ಯಳವಂತಗಿ, ಕಲ್ಯಾಣಪ್ಪ ಬಿರಾದಾರ, ಹಣಮಂತ ಖಜೂರಿ, ಅಶ್ವೀನಿ ಹಡಪದ, ನಾಗಲಿಂಗಯ್ಯಾ ಮಠಪತಿ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here