ಇಬ್ಬರು ರೋಡೆಕೋರರ ಬಂಧನ

0
48

ಶಹಾಪುರ: ಮಧ್ಯರಾತ್ರಿ ರಾಜ್ಯ ಹೆದ್ದಾರಿಯ ಮೇಲೆ ಲಾರಿ ಚಾಲಕರನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಹೆದರಿಸಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಶಹಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಹಾಪುರ ತಾಲೂಕಿನ ಧರಿಯಾಪುರ ಗ್ರಾಮದ ದೇವಪ್ಪ ಯಡ್ರಾಮಿ(೨೫),ಮಹಲ ರೋಜಾದ ಮಲ್ಲಪ್ಪ ದಂಡಾಪುರ(೨೪) ದ ಬಂಧಿತ ಆರೋಪಿಗಳು.

Contact Your\'s Advertisement; 9902492681

ಕೆಲವು ದಿನಗಳ ಹಿಂದೆ ಶಹಾಪುರದಲ್ಲಿ ಈ ಆರೋಪಿಗಳು ಮಹಿಳೆಯೊಬ್ಬರ ಕತ್ತಿನಿಂದ ಮಾಂಗಲ್ಯ ಸರವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಖಚಿತ ಮಾಹಿತಿಯ ಆಧಾರದ ಮೇರೆಗೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ರಿಷಿಕೇಶ್ ಭಗವಾನ್, ಡಿವೈಎಸ್ಪಿ ಶಿವನಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಶಹಾಪುರ ಪೊಲೀಸ್ ಠಾಣೆಯ ಸಿಪಿಐ ಹನುಮರೆಡ್ಡಪ್ಪ ಪಿಎಸ್ಐ ಚಂದ್ರಕಾಂತ್ ಮ್ಯಾಕಲೆ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರ ತಂಡದಲ್ಲಿ ಹೆಡ್ಕಾನ್ ಸ್ಟೆಬಲ್ ಮಲ್ಲಣ್ಣ, ಹೊನ್ನಪ್ಪ, ಬಾಬು, ಸಿದ್ದರಾಮಯ್ಯ, ಸತೀಶ್ ಕುಮಾರ್, ಚಂದ್ರಕಾಂತ್ ,ಹಣಮಂತ, ಬಸವರಾಜ್ ಇದ್ದರು.ಈ ಪೊಲೀಸರ ಕಾರ್ಯಕ್ಕೆ ಎಸ್ಪಿ ರಿಷಿಕೇಶ್ ಭಗವಾನ್ ಸೋನಾವಣೆ ಅವರು ಶ್ಲಾಘಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here