ಮೇ 1 ರಂದು ನಿಜ ಸೇವಕರಿಗೆ ನಿತ್ಯ ನಮಿಸವ’ ವಿಶೇಷ ಕಾರ್ಯಕ್ರಮ

0
75

ಕಲಬುರಗಿ: ಸಮಾಜದ ಶುದ್ಧತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವಿವಿಧ ಸಮಾಜದ ಕಾಯಕ ಜೀವಿಗಳಿಗೆ ವಿಶೇಷವಾಗಿ 12ನೇ ಶತಮಾನದ ಬಸವಾದಿ ಶರಣರ ಆಶಯವನ್ನು ಎತ್ತಿ ಹಿಡಿಯುವ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಕಾಯಕ ದಿನಾಚರಣೆ ಅಂಗವಾಗಿ ‘ನಿಜ ಸೇವಕರಿಗೆ ನಿತ್ಯ ನಮಿಸವ’ ವಿಶೇಷ ಕಾರ್ಯಕ್ರಮವನ್ನು ಮೇ 1 ರಂದು ಹಮ್ಮಿಕೊಳಲಾಗಿದೆ ಎಂದು ಅಕಡಮಿಯ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ತಿಳಿಸಿದ್ದಾರೆ.

Contact Your\'s Advertisement; 9902492681

ಬೆಳಿಗ್ಗೆ 9:30ಕ್ಕೆ ಶ್ರೀ ಗುರು ನಾಗಲಿಂಗೇಶ್ವರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು, ಎಸ್.ಎಂ. ಪಟ್ಟಣಕರ್ ಗೌರವ ಅಧ್ಯಕ್ಷರಾಗಿ ಆಗಮಿಸದ್ದು, ಕಾರ್ಯಧ್ಯಕ್ಷ ಶಿವರಾಜ ಎಸ್ ಅಂಡಗಿ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಗಿರಿಮಲ್ಲ ಪರಮೇಶ್ವರ ಶಟಕಾರ, ಹಾಗೂ ಮಹಿಳಾ ಘಟಕದ ಅಧ್ಯಕ್ಷ ಮಾಲತಿ ರೇಷ್ಮಿ ಅವರು ಭಾಗವಹಿಸಲಿದ್ದಾರೆಂದು ತಮ್ಮ ಪ್ರಕಟಣೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here