ವಿಶ್ವ ಎದುರಿಸುತ್ತಿರುವ ನೀರಿನ ಸಮಸ್ಯೆಗಳಿಗೆ ಭಾರತವು ಪರಿಹಾರ ಹೊಂದಿದೆ: ರಾಜೇಂದ್ರ ಸಿಂಗ್

0
66

ಕಲಬುರಗಿ: ವಿಶ್ವ ಎದುರಿಸುತ್ತಿರುವ ನೀರಿನ ಸಮಸ್ಯೆಗಳಿಗೆ ಭಾರತ ಪರಿಹಾರ ಮಾರ್ಗ ಹೊಂದಿದೆ. ಮತ್ತು ನೀರಿಗಾಗಿ ರಾಷ್ಟ್ರಗಳ ಮಧ್ಯೆ ಮುಂಬರುವ ಮೂರನೇ ಮಹಾಯುದ್ಧವನ್ನು ತಪ್ಪಿಸುತ್ತದೆ. ಎಂದು ರಾಜಸ್ಥಾನದ ಖ್ಯಾತ ಜಲ ತಜ್ಞ ಮತ್ತು ಪ್ರತಿಷ್ಠಿತ ವಿಶ್ವ ಜಲ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಹೇಳಿದರು.

ನಗರದ ಶರಣಬಸವ ಶತಮಾನೋತ್ಸವ ಭವನದಲ್ಲಿ ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯ, ಜಲ ಸಮಿತಿಗಳ ಒಕ್ಕೂಟ ಕಲಬುರಗಿ, ಜಲಜಾಗೃತಿ ಅಭಿಯಾನ ವೇದಿಕೆ, ಥ್ರೀಜೆ ಕ್ಲಬ್ ಆಳಂದ, ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಲ ಜಾಗೃತಿ ಸಮಾವೇಶದಲ್ಲಿ ಜಲ ಸಂರಕ್ಷಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಾ ನೀರಿನ ಬಿಕ್ಕಟ್ಟು ಜಾಗತಿಕವಾಗಿದ್ದರೂ, ಪರಿಹಾರ ಮಾತ್ರ ಸ್ಥಳೀಯವಾಗಿದೆ. ನೀರನ್ನು ಗೌರವಿಸುವ ಮತ್ತು ಅನಾದಿ ಕಾಲದಿಂದ ನೀರನ್ನು ಮರುಬಳಕೆ ಮಾಡುವ ತತ್ವವನ್ನು ಅನುಸರಿಸುವ ಅಂತರ್ಗತ ಸಂಸ್ಕೃತಿ ಹೊಂದಿರುವ ದೇಶ ಭಾರತವಾಗಿದೆ. ಎಂದು ಹೇಳಿದರು.

Contact Your\'s Advertisement; 9902492681

ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ಈ ತತ್ವಗಳನ್ನು ಅಭ್ಯಾಸ ಮಾಡುವಲ್ಲಿ ಕೆಲವು ವಿರೂಪಗಳು ಕಂಡು ಬಂದರೂ, ನೀರಿನ ಸಂರಕ್ಷಣೆ ಮತ್ತು ನೀರಿನ ನಿರ್ವಹಣಾ ಪದ್ದತಿಗಳನ್ನು ನಮ್ಮ ಹಿರಿಯರು ಅಳವಡಿಸಿಕೊಂಡ ಈ ಸಂಸ್ಕೃತಿಯನ್ನು ಇನ್ನೂ ದೇಶದ ಜನರು ಅನುಸರಿಸುತ್ತಿದ್ದಾರೆ. ಇಂತಹ ತತ್ವಗಳನ್ನು ವಿಶ್ವಾದ್ಯಂತ ರಾಷ್ಟ್ರಗಳು ಅಳವಡಿಸಿಕೊಂಡರೆ ನೀರಿನ ನಿರ್ವಹಣೆ ಮತ್ತು ಬಿಕ್ಕಟ್ಟನ್ನು ಸುಲಭವಾಗಿ ತಪ್ಪಿಸಬಹುದಾಗಿದೆ ಎಂದು ನೀರಿನ ಮಹತ್ವ ಕುರಿತು ರಾಜೇಂದ್ರ ಸಿಂಗ್ ತಿಳಿಸಿದರು.

ನೀರು ಮತ್ತು ನೀರು ನಿರ್ವಹಣಾ ತಂತ್ರಜ್ಞಾನಗಳ ಸಂರಕ್ಷಣೆಯಂತಹ ಪ್ರಮುಖ ವಿಷಯಗಳಿಂದ ದೇಶವು ದೂರವಾಗಲು ಒಂದು ಕಾರಣವೆಂದರೆ ಜನರು ದೇವರನ್ನು ಹೊರತು ಪಡಿಸಿ ಪ್ರಕೃತಿಯನ್ನು ಗೌರವಿಸುವ ಮತ್ತು ಅಪ್ರಸ್ತುತ ವಿಷಯಗಳಲ್ಲಿ ತಮ್ಮ ಸಮಯವನ್ನು ಕಳೆಯುವ ಹಳೆಯ ತತ್ವಗಳನ್ನು ಜನರು ಮರೆತು ಬಿಡುತ್ತಿದ್ದಾರೆ. ಮತ್ತು ನೀರು ಎಲ್ಲರಿಗೂ ಅಗತ್ಯ ಇರುವದಿಂದ ನೀರು ಪ್ರತಿಯೊಬ್ಬರನ್ನು ಒಂದುಗೂಡಿಸುತ್ತದೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳುವ ಮೂಲಕ ನೀರಿನ ಬಿಕ್ಕಟ್ಟನ್ನು ನಿವಾರಿಸಬಹುದಾಗಿದೆ ಎಂದು ಡಾ. ಸಿಂಗ್ ಅಭಿಪ್ರಾಯ ಪಟ್ಟರು. ರಾಜಸ್ಥಾನದ ಬರ ಪೀಡಿತ ಗ್ರಾಮಗಳ ಮುಖವನ್ನು ಬದಲಾಯಿಸಲು ಮತ್ತು ಅವುಗಳನ್ನು ನೀರಿನ ಸ್ವಾವಲಂಬಿಯನ್ನಾಗಿ ಮಾಡಲು ಮಾಡಿದ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿರುವ ಡಾ.ಸಿಂಗ್ ಜಗತ್ತು ಮತ್ತು ಭಾರತ ಎದುರಿಸುತ್ತಿರುವ ನೀರಿನ ಬಿಕ್ಕಟನ್ನು ನೀರಿನ ನೀತಿ, ನೀರಿನ ನ್ಯಾಯಯುತ ಮತ್ತು ಪರಿಣಾಮಕಾರಿ ಬಳಕೆಯ ಕುರಿತು ನೀರಿನ ಸಾಕ್ಷರತಾ ಆಂದೋಲನವನ್ನು ಆರಂಭಿಸುವ ಮೂಲಕ ನೀರಿನ ಬಿಕ್ಕಟ್ಟು ನಿವಾರಿಸಬಹುದು. ಎಂದು ಹೇಳಿದರು.

ಸಮಾಜದ ಎಲ್ಲಾ ವರ್ಗದವರು ವಿಶೇಷವಾಗಿ ಯುವ ಪೀಳಿಗೆಗಳು ಮತ್ತು ವಿದ್ಯಾರ್ಥಿಗಳ ಸಹಯೋಗದ ಪ್ರಯತ್ನದಿಂದ ಜಲ-ಜಂಗಲ್-ಜಮೀನ್ ಸಂರಕ್ಷಣೆ ಚಳುವಳಿ ಮತ್ತು ತತ್ವಗಳ ಆಧಾರದ ಮೇಲೆ ಪರಿಣಾಮಕಾರಿಯಾದ ನೀರಿನ ಸಾಕ್ಷರತಾ ಆಂದೋಲನವನ್ನು ಜನಸಮುದಾಯದಿಂದ ನಡೆಸಬಹುದಾಗಿದೆ ಎಂದು ಡಾ.ಸಿಂಗ್ ಹೇಳಿದರು. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ರಾಜಸ್ಥಾನದ ಬರ ಪೀಡಿತ ಹಳ್ಳಿಗಳಲ್ಲಿ ಅವರ ಸ್ಮಾರಕ ಕಾರ್ಯಗಳ ಬಗ್ಗೆ ವಿವರವಾಗಿ ಹೇಳಿರುವ ಡಾ.ಸಿಂಗ್ ಈ ಅವಧಿಯಲ್ಲಿ ಸರಕಾರದ ಸಹಾಯವಿಲ್ಲದೆ ಮತ್ತು ಜನರ ಸಹಕಾರವನ್ನು ಸಂಪೂರ್ಣವಾಗಿ ಅವಲಂಬಿಸಿ ೧೨ ಬತ್ತಿ ಹೋದ ನದಿಗಳನ್ನು ಪುನರ್‌ಜೀವಗೊಳಿಸಲಾಗಿದೆ. ಲಕ್ಷಾಂತರ ಬತ್ತಿದ ಕೊಳವೆಬಾವಿಗಳು ಸುಧಾರಿತ ಅಂತರ್ಜಲ ಮಟ್ಟದಿಂದ ಭರ್ತಿಯಾದವು. ಮತ್ತು ಬರ ಪೀಡಿತ ಪ್ರದೇಶಗಳ ಚಿತ್ರಣವನ್ನು ಹಸಿರು ಬಣ್ಣದ ದೀರ್ಘಾಲಿಕ ತರಕಾರಿಗಳ ಮೂಲವಾಗಿ ಮಾಡುವ ಮೂಲಕ ನವದೆಹಲಿ ಮತ್ತು ರಾಜಸ್ಥಾನದ ಜೈಪುರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಉದ್ಘಾಟನಾ ಭಾಷಣ ಮಾಡಿ ಅಂತರ್ಜಲ ಸಂಪನ್ಮೂಲಗಳ ಪುನರ್‌ಜೀವನದ ತುರ್ತು ಅವಶ್ಯಕತೆ ಇದೆ. ಆ ಮೂಲಗಳನ್ನು ರಕ್ಷಿಸುವ ಜವಾಬ್ದಾರಿ ಯುವಪೀಳಿಗೆಗೆ ಇದೆ ಎಂದು ಹೇಳಿದರು. ಹೈದರಾಬಾದ್ ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ರಾವ ಮಾತನಾಡಿ ಆಹಾರ ಪದ್ದತಿಯನ್ನು ಬದಲಾಯಿಸುವವುದು ಮತ್ತು ಸಕ್ಕರೆ ಸೇರಿದಂತೆ ನೀರಿನ ಗಜ್ಲಿಂಗ್ ಸಸ್ಯಗಳಿಂದ ಹೊರಬರುವ ಆಹಾರ ಪದಾರ್ಥಗಳನ್ನು ತ್ಯಜಿಸುವುದು ಮತ್ತು ಈ ಬೆಳೆಗಳನ್ನು ಬಳಸಲು ನೀರನ್ನು ಉಳಿಸಲು ಸಹಾಯ ಮಾಡುತ್ತದೆ. ಎಂದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಅವರು ನೀರನ್ನು ಉಳಿಸಲು ಮತ್ತು ರಕ್ಷಿಸಲು ಸಮಾವೇಶದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾನವಿಧಿ ಭೋದಿಸಿದರು.

ಗೌರವಾನ್ವಿತ ಅತಿಥಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಹೈದರಾಬಾದ್ ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ರಾವ, ಧಾರವಾಡ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ರಾಜೇಂದ್ರ ಪೊದ್ದಾರ ಇದ್ದರು. ಕಾರ್ಯಕ್ರಮವನ್ನು ವಿವಿಯ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ ನಿರೂಪಿಸಿದರು. ಕೆ.ನೀಲಾ ಸ್ವಾಗತಿಸಿದರು. ಡಾ.ಸಂಪತರಾವ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here