ಐದು ದಿನಗಳ ಕೊಟ್ಟುರು ಬಸವೇಶ್ವರ ಜಾತ್ರಾ ಮಹೋತ್ಸವ ಆರಂಭ

0
17

ಸುರಪುರ: ಪ್ರತಿ ವರ್ಷದಂತೆ ಈ ವರ್ಷವು ರುಕ್ಮಾಪುರದ ಆರಾಧ್ಯ ದೈವವಾದ ಶ್ರೀ ಕೊಟ್ಟೂರು ಬಸವೇಶ್ವರರ ಐದು ದಿನಗಳ ಜಾತ್ರಾ ಮಹೋತ್ಸವವು ಇಂದಿನಿಂದ (೧೦-೦೯-೨೦೧೯) ಐದು ದಿನಗಳ ಕಾಲ ನಡೆಯಲಿದೆ ಎಂದು ಎಲ್ಲಾ ಕಾರ್ಯಕ್ರಮದ ಸಾನಿಧ್ಯವಹಿಸಲಿರುವ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ದಿನಾಂಕ ೧೦ರ ಮಂಗಳವಾರ ಹುಚ್ಚಯೋತ್ಸವ ಹಾಗು ೧೧ರ ಬುಧವಾರ ರಾತ್ರಿ ಪುರವಂತರ ಹಾಗು ಪಲ್ಲಕ್ಕಿ ಸೇವೆ,೧೨ರ ಗುರುವಾರ ಬೆಳಿಗ್ಗೆ ಅಭಿಷೇಕ ಪೂಜೆ ಹಾಗು ಬಿಲ್ವಾರ್ಚನೆ,೧೪ ರಂದು ಸಾಯಂಕಾಲ ಉಚ್ಚಯೋತ್ಸವ ಮತ್ತು ೧೬ರಂದು ಸೋಮವಾರ ಸಾಯಂಕಾಲ ಕಳಾಸಾರೋಹಣ ಮಹಾಮಂಗಲ ಕಾರ್ಯಕ್ರಮ ಜರುಗುವವು.ಈ ಎಲ್ಲಾ ಕಾರ್ಯಕ್ರಮದ ನೇತೃತ್ವವನ್ನು ಗ್ರಾಮದ ಪ್ರಮುಖರಾದ ಹನುಮಗೌಡ ಪೊಲೀಸ್ ಪಾಟೀಲ್ ದಳಪತಿ,ಮುದಕಪ್ಪಗೌಡ,ಶಿವು ಸಾಹುಕಾರ,ಸಂಗಣ್ಣ ಮಿಣಜಗಿ,ಮಾನಯ್ಯಗೌಡ,ಸಂಗಣ್ಣ ಸಿರಗೊಳ ಹಾಗು ರುಕ್ಮಾಪುರ ಗ್ರಾಮಸ್ಥರು ಸೇರಿ ವೆಜೃಂಭಣೆಯಿಂದ ಆಚರಿಸಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here