ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಶಹಾಪುರದಲ್ಲಿ ವಿಜಯೋತ್ಸವ

0
116

ಯಾದಗಿರಿ/ಶಹಾಪುರ: ಕಾಂಗ್ರೆಸ್ ಮತ್ತು ಜೆಡಿಎಸ್ ದುರಾಡಳಿತಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಮುಂದಿನ ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಡೆಸಲಿದೆ ಎಂದು ಬಿಜೆಪಿಯ ಮುಖಂಡ ಗುರು ಕಾಮಾ ಅವರು ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದ ಸಲುವಾಗಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಮಾತನಾಡಿದರು. ಯಡಿಯೂರಪ್ಪನವರ ಸರಕಾರ ಸುಭದ್ರವಾಗಿದ್ದು ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಲ್ಲು ಗಂಧದ ಮಠ, ಸತೀಶ ಪಂಚಭಾವಿ, ಶಾಂತಪ್ಪ ಕಟ್ಟಿಮನಿ,ಮಲ್ಲಿಕಾರ್ಜುನ ಚಿಲ್ಲಾಳ, ರಾಜು ಬಾಣತಿಹಾಳ, ಮಲ್ಲು ಉಳ್ಳಿ, ನರಸನಾಯಕ, ಚಂದ್ರು ಯಾಳಗಿ,ಬಸವರಾಜ್ ರತ್ತಾಳ,ಹಾಗೂ ಬಿಜೆಪಿಯ ಇತರ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here