ಏಡ್ಸ್ ಎಂಬುದು ಮಾರಕ ರೋಗ ಜನತೆ ಇದರಿಂದ ದೂರವಿರಿ: ಗಂಗಾಧರ ರುಮಾಲ

0
50

ಸುರಪುರ: ಏಡ್ಸ್ ಎಂಬುದು ಒಂದು ಮಾರಕ ಅಂಟು ರೋಗವಾಗಿದ್ದು ಜನತೆ ಇದರಿಂದ ದೂರವಿರುವ ಮೂಲಕ ನೆಮ್ಮದಿಯ ಜೀವನ ನಡೆಸಬಹುದು ಎಂದು ಡಾ:ಬಿ.ಆರ್.ಅಂಬೇಡ್ಕರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ:ಗಂಗಾಧರ ರುಮಾಲ ಮಾತನಾಡಿದರು.

ನಗರದ ರಂಗಂಪೇಟೆಯ ಹಸನಾಪುರದಲ್ಲಿರುವ ಡಾ:ಬಾಬಾ ಸಾಹೇಬ ಅಂಬೇಡ್ಕರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಏಡ್ಸ್ ಪ್ರವೇನಷನ್ ಸೊಸೈಟಿ,ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ,ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗು ಡಾ:ಬಿ.ಆರ್.ಅಂಬೇಡ್ಕರ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಧಾರವಡ ಜಿಲ್ಲೆಯ ಕುಂದಗೋಳ ತಕ್ಲಿಪುರದ ಆದರ್ಶ ಕಲಾ ತಂಡದ ವತಿಯಿಂದ ಮಹೇಶ ಹಿರೇಗೌಡರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹೆಚ್.ಐ.ವಿ ಹಾಗು ಏಡ್ಸ್ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಏಡ್ಸ್ ರೋಗವು ತುಂಬಾ ಭಯಾನಕವಾದ ರೋಗವಾಗಿದ್ದು,ಇದು ಅಸುರಕ್ಷಿತ ಲೈಂಗಿಕತೆ,ಒಬ್ಬರ ಸಿರೆಂಜ್ ಮತ್ತೊಬ್ಬರಿಗೆ ಬಳಕೆ ಹೀಗೆ ಅನೇಕ ಕಾರಣಗಳಿಂದ ಬರುತ್ತದೆ. ಒಂದು ಬಾರಿ ಇದು ಬಂದರೆ ಮರಣದ ಕಡೆಗೆ ಹೊರಟಂತೆ. ಆದ್ದರಿಂದ ಜನತೆ ಇದು ಬರದಂತೆ ಎಚ್ಚರ ವಹಿಸುವಂತೆ ತಿಳಿಸಿದರು.

Contact Your\'s Advertisement; 9902492681

ನಂತರ ಕಲಾ ತಂಡಗಳ ವೀರಗಾಸೆ ಪ್ರದರ್ಶನದ ಮೂಲಕ ಹೆಚ್.ಐ.ವಿ ಮತ್ತು ಹೇಗೆ ಬರುತ್ತದೆ,ಇದು ಬಾರದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಅರಿವು ಮೂಡಿಸದರು.ಕಾರ್ಯಕ್ರಮದ ಆರಂಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ:ಉಮಾದೇವಿ ಮಟ್ಟಿ ನಗಾರೆ ಬಾರಿಸುವ ಮೂಲಕ ಚಾಲನೆ ನೀಡಿದರು.ವೇದಿಕೆ ಮೇಲೆ ಈಶ್ವರಪ್ಪ ತಳವಾರ,ಡಾ: ಭಾರತಿ,ಡಾ:ಕವಿತಾ,ಆರೋಗ್ಯ ಇಲಾಖೆಯ ಪ್ರದೀಪ,ಶ್ರೀಕಾಂತ ಶಿವಯೋಗಿಮಠ ಇದ್ದರು.ಕಾಲೇಜಿನ ಎಲ್ಲಾ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here