ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ ಹೃದಯಾಘಾತದಿಂದ ಸಾವು

0
498

ಯಾದಗಿರಿ/ ಶಹಾಪುರ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಖ್ಯಾತ ಮಕ್ಕಳ ಸಾಹಿತಿಗಳಾದ ಚಂದ್ರಕಾಂತ ಕರದಳ್ಳಿ ಅವರು ಇಂದು ಹೃದಯಾಘಾತದಿಂದ ವಿಧಿವಶರಾದ ರೆಂದು ತಿಳಿಸಲು ತುಂಬಾ ನೋವೆನಿಸುತಿದೆ.

ಎರಡು ಮೂರು ದಿನಗಳ ಹಿಂದೆ ಕೆಲಸದ ನಿಮಿತ್ತ ದೂರದ ಬೆಂಗಳೂರಿಗೆ ಹೋಗಿದ್ದರು ಇ೦ದು ಹನ್ನೊಂದು ಹನ್ನೆರಡರ ಬೆಂಗಳೂರಿನ ಸುಮಾರಿಗೆ ಪ್ರೊಫೆಷನಲ್ ಕೂರಿಯರ್ ಅಂಗಡಿ ಮುಂದ ಒಂದರಲ್ಲಿ ಏಕಾಏಕಿ ಜ್ಞಾನ ತಪ್ಪಿ ಬಿದ್ದಾಗ ಅಲ್ಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ.

Contact Your\'s Advertisement; 9902492681

ಸುಮಾರು ನಲವತ್ತೈದು ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಹೈದರಾಬಾದ್ ಕರ್ನಾಟಕದಾದ್ಯಂತ ಹೆಸರು ಮಾಡಿರುವ ಹಿರಿಯ ಸಾಹಿತಿಗಳು ಜೊತೆಗೆ ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಹಾಪುರ ತಾಲ್ಲೂಕು ಸಮ್ಮೇಳನ ಸರ್ವಾಧ್ಯಕ್ಷರಾಗಿ ಕನ್ನಡದ ನುಡಿ ತೇರನ್ನು ಎಳೆದಿದ್ದರು.

ಇವರಿಗೆ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದವು .

ಇವರ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಶಿವಣ್ಣ ಇಜೇರಿ ಸಿದ್ರಾಮ ಹೊನಕಲ ಬಸವರಾಜ್ ಹಿರೇಮಠ್ ವಿಶ್ವರಾಧ್ಯ ಸತ್ಯಂಪೇಟೆ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಪಂಚಾಕ್ಷರಿ ಹಿರೇಮಠ್ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here